ಡಿ.23: ಪಡ್ನೂರು ಶ್ರೀ ರಾಮ್ ಫ್ರೆಂಡ್ಸ್ ಇದರ 11ನೇ ವಾರ್ಷಿಕೋತ್ಸವ ಸಲುವಾಗಿ ರಕ್ತದಾನ, ಕಣ್ಣಿನ ತಪಾಸಣಾ ಶಿಬಿರ, ಕಬಡ್ಡಿ ಪಂದ್ಯಾಟ

0

ಪುತ್ತೂರು: ಪಡ್ನೂರು ಶ್ರೀ ರಾಮ್ ಫ್ರೆಂಡ್ಸ್ ಇದರ 11ನೇ ವಾರ್ಷಿಕೋತ್ಸವ ಪ್ರಯುಕ್ತ ಪಡ್ನೂರು ಶಾಲಾ ಅವರಣದಲ್ಲಿ ಡಿ.23 ಬೆಳಗ್ಗೆ 9.30 ರಿಂದ ರೋಟರಿ ಬ್ಲಡ್ ಸೆಂಟರ್ ಪುತ್ತೂರು ಹಾಗೂ ಕಾಮತ್ ಒಪ್ಟಿಕಲ್ಸ್ ಪುತ್ತೂರು ಸಹಕಾರದೊಂದಿಗೆ ಉಚಿತ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಲಿದೆ.


ಕಾರ್ಯಕ್ರಮ ಉದ್ಘಾಟನೆ ಮಾಜಿ ಶಾಸಕ ಸಂಜೀವ ಮಠಂದೂರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಬನ್ನೂರು ಗ್ರಾ.ಪಂ.ಅಧ್ಯಕ್ಷೆ ಸ್ಮಿತಾ ವಹಿಸಲಿದ್ದು, ಹಲವು ಅತಿಥಿಗಳು ಹಾಜರಿರಲಿದ್ದಾರೆ. ಸಂಜೆ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಭಾ ಕಾರ್ಯಕ್ರಮ ಜರುಗಲಿದ್ದು, ಅಧ್ಯಕ್ಷತೆಯನ್ನು ಡಾ.ಸುರೇಶ್ ಪುತ್ತೂರಾಯ ವಹಿಸಲಿದ್ದಾರೆ. ಶಮಿತಾ ನಿಲಯ ನಿವಾಸಿ ದಿ.ಸುಂದರ ನಾಯ್ಕ ಇವರ ಸ್ಮರಣಾರ್ಥ ಅನ್ನಸಂತರ್ಪಣೆ ನಡೆಯಲಿದ್ದು, ಶ್ರೀಲಲಿತೆ ಕಲಾವಿದೆರ್ ಮಂಗಳೂರು ಇವರಿಂದ ಪೌರಾಣಿಕ ತುಳು ನಾಟಕ ಗರುಡ ಪಂಚೆಮಿ ಪ್ರದರ್ಶನಗೊಳ್ಳಲಿದೆ. ಆ ಬಳಿಕ ಹಿಂದೂ ಭಾಂದವರ 55 ಕೆ.ಜಿ ಪುರುಷರ ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಕರುಣೋದಯ ಮ್ಯಾಟ್ ಅಂಕಣದಲ್ಲಿ ಜರುಗಲಿದೆಯೆಂದು ಪಡ್ನೂರು ಶ್ರೀ ರಾಮ್ ಫ್ರೆಂಡ್ಸ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here