ಪುತ್ತೂರು -ಪುಣಚ -ವಿಟ್ಲ ಕೆ.ಎಸ್.ಆರ್.ಟಿ.ಸಿ. ಹೆಚ್ಚುವರಿ ಬಸ್ ಸಂಚಾರ- ಪುಣಚದಲ್ಲಿ ಚಾಲನೆ

0

ಪುಣಚ : ಪುತ್ತೂರು -ಪರ್ಲಡ್ಕ ಮಾರ್ಗವಾಗಿ ಬುಳೇರಿಕಟ್ಟೆ ಪುಣಚ ಪರಿಯಾಲ್ತಡ್ಕ ಮಾರ್ಗವಾಗಿ ವಿಟ್ಲಕ್ಕೆ ಸಂಚರಿಸುವ ಕೆ.ಎಸ್.ಆರ್.ಟಿ.ಸಿ. ಯ ಹೆಚ್ಚುವರಿ ಬಸ್ ಸಂಚಾರಕ್ಕೆ ಪುಣಚದಲ್ಲಿ ಡಿ. 22ರಂದು ಚಾಲನೆ ನೀಡಲಾಯಿತು.


ಕೆ.ಎಸ್.ಆರ್.ಟಿ.ಸಿ. ವತಿಯಿಂದ ಪುತ್ತೂರು ಬುಳೇರಿಕಟ್ಟೆ ಪುಣಚ ಮಾರ್ಗವಾಗಿ ವಿಟ್ಲಕ್ಕೆ ಬಸ್ಸು ಸಂಚಾರ ಆರಂಭಗೊಂಡ ಹಿನ್ನೆಲೆಯಲ್ಲಿ ಪರಿಯಾಲ್ತಡ್ಕ ಶಾಲಾ ನಿವೃತ್ತ ಮುಖ್ಯ ಗುರು ಹರ್ಷಶಾಸ್ತ್ರಿ ಮಣಿಲ ತೆಂಗಿನಕಾಯಿ ಒಡೆಯುವ ಮೂಲಕ ಪುಣಚ ಪರಿಯಾಲ್ತಡ್ಕದಲ್ಲಿ ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್ ಮಾತನಾಡಿ ಬಸ್ ಸಂಚಾರದಲ್ಲಿ ಸಂತಸ ವ್ಯಕ್ತಪಡಿಸಿ ಇದರ ಸದುಪಯೋಗ ಎಲ್ಲರಿಗೂ ಲಭಿಸಲಿ ಎಂದು ಶುಭ ಹಾರೈಸಿದರು, ಪುಣಚ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ,‌ ಪುಣಚ ವಲಯ ಕಾಂಗ್ರೆಸ್ ಕಾರ್ಯದರ್ಶಿ ಸಿರಾಜ್ ಮನಿಲ, ಆಲ್ಬರ್ಟ್ ಡಿಸೋಜಾ, ಕ್ಷೇವಿಯರ್, ರಾಜೇಂದ್ರ ರೈ, ಶ್ರೀಧರ್ ಶೆಟ್ಟಿ ದೇವರಗುಂಡಿ, ಹಮೀದ್ ಎಂ ಎಸ್, ದಿವಾಕರ ನಾಯ್ಕ, ಸುಂದರ್ ಸಾಲ್ಯಾನ್, ಅಬ್ದುಲ್ ರಹಿಮಾನ್ ಮನಿಲ, ಕಮರುದ್ದಿನ್ ಪರಿಯಾಲ್, ಉಬೈದ್ ಗರಡಿ, ಶರೀಫ್ ಬೊಲ್ಲರಡ್ಕ, ರಹೀಮ್ ನಟ್ಟಿ, ಹನೀಫ್ ಅಜ್ಜಿನಡ್ಕ, ನಾರಾಯಣ ನಾಯ್ಕ, ನಾರಾಯಣ ಪೂಜಾರಿ ಗರಡಿ, ಐತಪ್ಪ, ಶಕೂರ್, ಮನೋಜ್ ರೈ ಬೈಲುಗುತ್ತು, ಸುಲೈಮಾನ್ ಮುಸ್ಲಿಯಾರ್, ಅಬ್ದುಲ್ ಕುಂಜಿ ಬಡಕನಡ್ಕ, ಮಮ್ಮುoಜಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here