ಮನವಳಿಕೆಗುತ್ತು ಪಾಂಡುರಂಗ ಭಜನಾ ಮಂಡಳಿಯಿಂದ ಅರ್ಧ ಏಕಾಹ ಭಜನೆ

0

ಆಲಂಕಾರು : ಪೆರಾಬೆ ಗ್ರಾಮದ ಮನವಳಿಕೆಗುತ್ತು ಶ್ರೀಪಾಂಡುರಂಗ ಭಜನಾ ಮಂಡಳಿ ವತಿಯಿಂದ ಮನವಳಿಕೆಗುತ್ತು ಚಾವಡಿಯಲ್ಲಿ ಡಿ.23 ರಂದು ಅರ್ಧ ಏಕಾಹ ಭಜನೆ ನಡೆಯಿತು. ಬೆಳಿಗ್ಗೆ10 :00 ರಿಂದ ಭಜನೆ ಪ್ರಾರಂಭ ಅಹ್ವಾನಿತ ಭಜನಾ ಮಂಡಳಿಯಿಂದ ಭಜನೆ ಮಧ್ಯಾಹ್ನ 1:00 ಮಂಗಳಾರತಿ ನಂತರ ಅನ್ನಸಂತರ್ಪಣೆ ನಂತರ ರಾತ್ರಿ 7:00 ಮಂಗಳಾರತಿ , ಅನ್ನಸಂತರ್ಪಣೆ ನಂತರ ಭಜನ ರಾತ್ರಿ 10:00 ಕ್ಕೆ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.

ಆಹ್ವಾನಿತ ಭಜನಾ ತಂಡಗಳಾದ ಶಾರದಾ ಭಜನಾ ಮಂಡಳಿ ಕುಂತೂರು, ಕಾಳಿಕಾಂಬಾ ಭಜನಾ ಮಂಡಳಿ ಮನವಳಿಕೆ, ಉಮಾಮಹೇಶ್ವರಿ ಭಜನಾ ಮಂಡಳಿ ಬಲ್ಯ, ಶಾರದಾಂಬಾ ಮಕ್ಕಳ ತಂಡ ಶಾರದಾನಗರ ರಾಮಕುಂಜ, ದುರ್ಗಾಪರಮೇಶ್ವರೀ ಭಜನಾ ಮಂಡಳಿ ಕೆಮ್ಮಾರ, ರಾಮ ಭಜನಾ ಮಂಡಳಿ ತುಂಬೆತ್ತೋಡಿ, ಅದಿಶಕ್ತಿ ಭಜನಾ ಮಂಡಳಿ ಶರವೂರು, ಶಾರದ ಮಹಿಳಾ ಸಮಿತಿ ಕುಂತೂರು, ದುರ್ಗಾಶಕ್ತಿ ಭಜನಾ ಮಂಡಳಿ ಆಲಂಕಾರು, ವಿಷ್ಣುಮೂರ್ತಿ ಭಜನಾ ಮಂಡಳಿ ದೇವರಗುಡ್ಡೆ ಪೂಂಜ, ಚರಣ್‌ರಾಜ್ ಮತ್ತು ಬಳಗ ಕುಂತೂರು ಗಡಿಯರನಡ್ಕ, ವಿಷ್ಣುಮೂರ್ತಿ ಭಜನಾ ಮಂಡಳಿ,ದೇವರಗುಡ್ಡೆ ಪೂಂಜ, ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು ಇವರಿಂದ ಭಜನೆ ನಡೆಯಿತು.

ಮನವಳಿಕೆಗುತ್ತು ಕುಟುಂಬದ ಯಾಜಮಾನ ರಮಾನಾಥ ರೈ ಮತ್ತು ಕುಟುಂಬಸ್ಥರು, ಮನವಳಿಕೆಗುತ್ತು ಕುಟುಂಬದ ದೈವ ದೇವರುಗಳ ಟ್ರಸ್ಟ್ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ, ಪಾಂಡುರಂಗ ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ರೈ, ಕಾರ್ಯದರ್ಶಿ ವಿಜಯ ರೈ ಮನವಳಿಕೆ, ಜೊತೆ ಕಾರ್ಯದರ್ಶಿ ಮಂಜೇಶ್ ಶೆಟ್ಟಿ ಮನವಳಿಕೆ ಹಾಗೂ ಪಾಂಡುರಂಗ ಭಜನಾ ಮಂಡಳಿಯ ಸದಸ್ಯರು .ಹಾಗು ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here