ಪೆರಿಯಶಾಂತಿ: ಕಾರು ಚರಂಡಿಗೆ-ಐವರಿಗೆ ಗಾಯ

0

ನೆಲ್ಯಾಡಿ: ಚಾಲಕನ ಹತೋಟಿ ತಪ್ಪಿ ಕಾರು ಚರಂಡಿಗೆ ಬಿದ್ದು ಚಾಲಕ ಸಹಿತ ಐವರು ಗಾಯಗೊಂಡಿರುವ ಘಟನೆ ಡಿ.23ರಂದು ಬೆಳಿಗ್ಗೆ ಇಚ್ಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ನಡೆದಿದೆ.

ಕಾರು ಚಾಲಕ ಮನೋಜ್‌ಕುಮಾರ್, ಮರಿಯಮ್ಮ, ಆನಿ ವರ್ಗೀಸ್, ರಾಜು ವಿ.ಎಮ್. ಹಾಗೂ ಸಿನ್ಸಿ ಎಂಬವರು ಗಾಯಗೊಂಡಿದ್ದು ಈ ಪೈಕಿ ಮರಿಯಮ್ಮ ಮತ್ತು ಆನಿ ವರ್ಗೀಸ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಘಟನೆಯಲ್ಲಿ ಕಾರು ಜಖಂಗೊಂಡಿದೆ. ಈ ಬಗ್ಗೆ ಕುಟ್ರುಪ್ಪಾಡಿ ನಿವಾಸಿ ಅನೀಸ್ ಎ.ಎಸ್.ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here