ಉಪ್ಪಿನಂಗಡಿ: ರಸ್ತೆ ಕಾಮಗಾರಿ ಸಂದರ್ಭ ನಡೆದ ಅವಾಂತರ – ಲಾರಿ ಮೇಲೆ ಬಿದ್ದ ಮರ: ವಿದ್ಯುತ್ ಕಂಬಗಳಿಗೆ ಹಾನಿ

0

ಉಪ್ಪಿನಂಗಡಿ: ಬೊಳುವಾರು- ಉಪ್ಪಿನಂಗಡಿ ಹೆದ್ದಾರಿಯಲ್ಲಿ ಬೇರಿಕೆಯಿಂದ ಬೊಳಂತಿಲದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಹಿಟಾಚಿನಲ್ಲಿ ಮಣ್ಣು ತೆಗೆಯುತ್ತಿರುವ ಸಂದರ್ಭ ರಸ್ತೆಯಲ್ಲಿ ಸಂಚರಿಸುತ್ತಿದ್ದ ಲಾರಿಯೊಂದರ ಮೇಲೆ ಮರ ಬಿದ್ದ ಘಟನೆ ಬೇರಿಕೆ ಎಂಬಲ್ಲಿ ಡಿ.28ರಂದು ನಡೆದಿದೆ.
ಘಟನೆಯಿಂದ ಪ್ರಯಾಣಿಕರಿಗೆ ಯಾವುದೇ ಅವಘಡಗಳಾಗದಿದ್ದರೂ, ಲಾರಿಗೆ ಹಾನಿಯಾಗಿದೆಯಲ್ಲದೆ, ಸುಮಾರು 5ರಷ್ಟು ವಿದ್ಯುತ್ ಕಂಬಗಳು ಬಿದ್ದಿವೆ. ಇದರಿಂದ ರಸ್ತೆ ಸಂಚಾರಕ್ಕೆ ಕೆಲ ಹೊತ್ತು ತಡೆಯುಂಟಾಗುವಂತಾಗಿತ್ತು. ರಸ್ತೆಯಲ್ಲಿ ಬೇರೆ ಸಣ್ಣ ವಾಹನಗಳು ಸಂಚರಿಸುವಾಗ ಈ ರೀತಿಯಾಗಿದ್ದರೆ ಅನಾಹುತಕ್ಕೆ ಕಾರಣವಾಗುತ್ತಿತ್ತು.

LEAVE A REPLY

Please enter your comment!
Please enter your name here