ಒಳಮೊಗ್ರು ಅಯೋಧ್ಯೆ ಪವಿತ್ರ ಮಂತ್ರಾಕ್ಷತೆಯ ಹಸ್ತಾಂತರ

0

ಪುತ್ತೂರು: ಅಯೋದ್ಯೆ ಶ್ರೀ ರಾಮ ಜನ್ಮಭೂಮಿಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಒಳಮೊಗ್ರು ಗ್ರಾಮದ ಶ್ರೀರಾಮ ಭಜನಾ ಮಂದಿರ ಕುಂಬ್ರ ಕ್ಕೆ ತಂದು ಪ್ರತಿ ದಿನ ಪೂಜೆ ಭಜನೆ ಯೊಂದಿಗೆ ಆರಾಧನೆ ನಡೆಸಲಾಗುತ್ತಿತ್ತು. ಜ.01ರಂದು ಪುರೋಹಿತರಾದ ಸಂತೋಷ್ ಭಟ್ ರವರ ಮೂಲಕ ಮಂತ್ರಾಕ್ಷತೆಗೆ ಪೂಜೆ ನಡೆಸಿ ಮಂತ್ರಾಕ್ಷತೆ ತಾಲೂಕು ಸಮಿತಿ ಪ್ರಮುಖರಿಂದ ಬೂತ್ ಸಂಚಾಲಕರಿಗೆ ಹಸ್ತಾಂತರ ಕಾರ್ಯಕ್ರಮ ನಡೆಯಿತು . ಸಂಜೆ ಪ್ರತಿ ಮನೆ ಮನೆಗೂ ಮಂತ್ರಾಕ್ಷತೆಯನ್ನು ಹಂಚಲಾಯಿತು.
ಈ ಸಂದರ್ಭ ದಲ್ಲಿ ಮಂತ್ರಾಕ್ಷತೆಯ ಮಹತ್ವದ ಬಗ್ಗೆ ಪ್ರಕಾಶ್ಚಂದ್ರ ರೈ ಕೈಕಾರರವರು ಅರಿವು ಮೂಡಿಸಿದರು. ಒಳಮೊಗ್ರು ಗ್ರಾಮದ ಸಂಚಾಲಕರು ಬೂತ್ ನ ಅಧ್ಯಕ್ಷರು ಕಾರ್ಯದರ್ಶಿಗಳು ಸಮಿತಿ ಸಂಚಾಲಕರು ಪದಾಧಿಕಾರಿಗಳು ಹಾಗೂ ಭಜನಾ ಮಂದಿರದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here