ಪಳ್ಳತ್ತಾರು ಜಮಾಅತ್ ಗಲ್ಫ್ ಸಮಿತಿ:ನೂತನ ಪದಾಧಿಕಾರಿಗಳ ಆಯ್ಕೆ

0

ಕಾಣಿಯೂರು: ಖಿದ್ಮತ್ತುಲ್ ಇಸ್ಲಾಂ ಗಲ್ಫ್ ಸಮಿತಿ ಪಳ್ಳತ್ತಾರು ಬೆಳಂದೂರು ಜಮಾಅತ್ ಇದರ 3ನೇ ವಾರ್ಷಿಕ ಮಹಾಸಭೆಯು ಝುಮ್ ಆನ್ಲೈನ್ ನಲ್ಲಿ ಅಧ್ಯಕ್ಷ ರಫೀಕ್ ಕೂಂಕ್ಯ ಮಕ್ಕಾರವರ ಅಧ್ಯಕ್ಷತೆಯಲ್ಲಿ ನಡೆಯಿತು. ಹನೀಫ್ ಹಿಮಮಿ ದುಆ ನೆರವೇರಿಸಿ ಜಾಬಿರ್ ಫೈಝಿ ಖಿರಾಅತ್ ಪಠಿಸಿದರು.
ಅಬ್ದುಲ್ ಲತೀಫ್ ಮಿಸ್ಬಾಹಿ ಬೆಳಂದೂರು ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಅಬ್ದುಲ್ ಮಜೀದ್ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು.ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು.


ಅಧ್ಯಕ್ಷರಾಗಿ ಹನೀಫ್ ಹಿಮಮಿ,ಉಪಾಧ್ಯಕ್ಷರಾಗಿ ಶಾದುಳಿ ಏರಿಮಾರ್,ಜಾಬಿರ್ ಫೈಝಿ,ಪ್ರಧಾನ ಕಾರ್ಯದರ್ಶಿಯಾಗಿ ಮಜೀದ್ ಬೆಳಂದೂರು,ಜೊತೆ ಕಾರ್ಯದರ್ಶಿಯಾಗಿ ಅನೀಸ್ ಕೂoಕ್ಯ,ಕೋಶಾಧಿಕಾರಿಯಾಗಿ ಅಶ್ರಫ್ ಅಮ್ಜದಿ ಬನಾರಿ,ಸಲಹೆಗಾರರಾಗಿ ಅಶ್ರಫ್ ಬೆಳಂದೂರು,ಲತೀಫ್ ಮಿಸ್ಬಾಹಿ ಬೆಳಂದೂರು,ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಯಾಕೂಬ್ ಬನಾರಿ ತಬೂಕ್,ರಫೀಕ್ ಕೂoಕ್ಯ,ಸಮೀರ್ ನೇರೊಳ್,ಯಾಕುಬ್ ಕುಂಚರಿಗೆ,ಇಕ್ಬಾಲ್ ಬನಾರಿ,ಆರಿಫ್ ಬೆಳಂದೂರು,ಆಸಿಫ್ ಗುಂಡಿನಾರು ಇವರನ್ನು ಆಯ್ಕೆ ಮಾಡಲಾಯಿತು.ಮಜೀದ್ ಸ್ವಾಗತಿಸಿ ಅಶ್ರಫ್ ಅಂಜದಿ ವಂದಿಸಿದರು.

LEAVE A REPLY

Please enter your comment!
Please enter your name here