![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2024/01/7ff7b0ee-549c-4558-a203-e0a9510956d8.jpg)
ಪುತ್ತೂರು: ಶಾಂತಿಗೋಡು ಗ್ರಾಮದ ಶ್ರೀ ಗುರು ವಲ್ತಾಜೆ ಸಾಂತಪ್ಪ ಗೌಡರವರ ಮನೆಯಲ್ಲಿ ಸೇರಜೆ ಕುಟುಂಬದ ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕವು ಫೆ.14ರಿಂದ ಫೆ.16ರ ವರೆಗೆ ಕೆಮ್ಮಿಂಜೆ ಬ್ರಹ್ಮ ಶ್ರೀ ವೇದಮೂರ್ತಿ ತಂತ್ರಿ ಸುಬ್ರಹ್ಮಣ್ಯ ಬಳ್ಳೆಕ್ಕೂರಾಯರ ಹಾಗೂ ವೇದಮೂರ್ತಿ ನಾರಾಯಣ ಇತಾಳ ರ ನೇತೃತ್ವದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜ.14ರಂದು ಶ್ರೀ ಗುರು ವಲ್ತಾಜೆ ಸಾಂತಪ್ಪ ಗೌಡ ರವರ ಮನೆಯಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವಸಂತ ಸೇರಜೆ, ಉಷಾಸಾಂತಪ್ಪ ವಾಲ್ತಾಜೆ ,ಉಮಾನಾಥ ಸೇರಜೆ, ಸುಶ್ಮಿತ್ ವಲ್ತಾಜೆ, ದೀಕ್ಷಾ ವಾಲ್ತಾಜೆ, ವೀಕ್ಷ ವಾಲ್ತಾಜೆ, ತೇಜಸ್ ಸೇರಜೆ, ಲಿಂಗಪ್ಪ ಗೌಡ ಮುಂಗ್ಲಿಮನೆ, ಚಿದಾನಂದ ಮುಂಗ್ಲಿಮನೆ, ಗೀತಾ ಸೇರಜೆ, ತನ್ವಿ ಮೀನಾವು ಮೊದಲಾದವರು ಉಪಸ್ಥಿತರಿದ್ದರು.