ಹಿರಿಯರ ಕ್ರೀಡಾಕೂಟದಲ್ಲಿ ಕಾವು ಅಬ್ದುಲ್ ಲತೀಫ್ ರಾಷ್ಟ್ರಮಟ್ಟಕ್ಕೆ

0

ಪುತ್ತೂರು: ಮಂಗಳೂರಿನ ಮಂಗಳಾ ಸ್ಟೇಡಿಯಂನಲ್ಲಿ ಜನವರಿ 13 ಮತ್ತು 14ರಂದು ನಡೆದ 42ನೇ ರಾಜ್ಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಕಾವು ಅಬ್ದುಲ್ ಲತೀಫ್ ಸಾಹೇಬರು ಉದ್ದ ಜಿಗಿತದಲ್ಲಿ ಬೆಳ್ಳಿ, ಅಡೆತಡೆ ಜಿಗಿತದಲ್ಲಿ ಬೆಳ್ಳಿ, 800 ಮೀ.ನಲ್ಲಿ ಕಂಚು, 4*1೦೦ ಮೀ. ನಲ್ಲಿ ಕಂಚಿನ ಪದಕವನ್ನು ಗಳಿಸಿರುತ್ತಾರೆ. ಮುಂಬಯಿ ಮತ್ತು ತಮಿಳುನಾಡಿನಲ್ಲಿ ಫೆ.2 ರಿಂದ 4ರವರೆಗೆ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ. ಇವರು ಗೂನಡ್ಕ, ಕಾವು ಮಾಡ್ನೂರು, ಪೆರ್ನಾಜೆ, ಫಿಲೋಮಿನಾ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಸದಸ್ಯರಾಗಿರುತ್ತಾರೆ.

LEAVE A REPLY

Please enter your comment!
Please enter your name here