![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಡಬ: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಕಡಬ ಶಾಖೆಯ ಸಕ್ರಿಯ ಸದಸ್ಯ ಪಟ್ರೊಡಿ ಪಿ.ಸದಾಶಿವ ಭಟ್ ರವರ ತೆರೆದ ಹೃದಯ ಚಿಕಿತ್ಸೆಗೆ ಸಹಾಯಧನದ ಮೊತ್ತ ರೂ.2 ಲಕ್ಷದ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ ಮಡ್ತಿಲರವರು ನೀಡಿದರು.
![](https://puttur.suddinews.com/wp-content/uploads/2024/01/0974d4bd-68a0-4c94-acbe-3d79df9b3e3d.jpg)
ಈ ಸಂದರ್ಭದಲ್ಲಿ ಸರಸ್ವತಿ ಶಾಲೆಯ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ಕ್ಯಾಂಪ್ಕೊ ಪುತ್ತೂರು ಪ್ರಾಂತೀಯ ಪ್ರಬಂಧಕ ಜಯರಾಮ ಶೆಟ್ಟಿ, ಕಡಬ ಶಾಖೆಯ ಪ್ರಬಂಧಕ ಮಹೇಶ ಕೆ. ಎನ್ ಹಾಗೂ ಸುಳ್ಯ ಶಾಖೆಯ ಪ್ರಬಂಧಕ ಕುನ್ಹಬು ಉಪಸ್ಥಿತರಿದ್ದರು.