ಕಡಬ: ಕ್ಯಾಂಪ್ಕೋ ಸಂಸ್ಥೆಯಿಂದ ಹೃದಯ ಶಸ್ತ್ರ ಚಿಕಿತ್ಸೆಗೆ ಧನ ಸಹಾಯ

0

ಕಡಬ: ಕ್ಯಾಂಪ್ಕೊ ಸಂಸ್ಥೆಯ ‘ಸಾಂತ್ವನ’ ಯೋಜನೆಯಡಿಯಲ್ಲಿ  ಕ್ಯಾಂಪ್ಕೊ ಕಡಬ ಶಾಖೆಯ ಸಕ್ರಿಯ ಸದಸ್ಯ ಪಟ್ರೊಡಿ ಪಿ.ಸದಾಶಿವ ಭಟ್ ರವರ ತೆರೆದ ಹೃದಯ ಚಿಕಿತ್ಸೆಗೆ ಸಹಾಯಧನದ ಮೊತ್ತ ರೂ.2 ಲಕ್ಷದ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ ಮಡ್ತಿಲರವರು ನೀಡಿದರು.

ಈ ಸಂದರ್ಭದಲ್ಲಿ ಸರಸ್ವತಿ ಶಾಲೆಯ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ಕ್ಯಾಂಪ್ಕೊ ಪುತ್ತೂರು ಪ್ರಾಂತೀಯ ಪ್ರಬಂಧಕ ಜಯರಾಮ ಶೆಟ್ಟಿ, ಕಡಬ ಶಾಖೆಯ ಪ್ರಬಂಧಕ ಮಹೇಶ ಕೆ. ಎನ್ ಹಾಗೂ ಸುಳ್ಯ ಶಾಖೆಯ ಪ್ರಬಂಧಕ ಕುನ್ಹಬು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here