ಕಡವಿನಬಾಗಿಲು: ಬ್ರಹ್ಮಕಲಶದ ಆಮಂತ್ರಣ ಪತ್ರ ಬಿಡುಗಡೆ

0

ಉಪ್ಪಿನಂಗಡಿ: ಇಲ್ಲಿನ ಕಡವಿನಬಾಗಿಲು ಶ್ರೀ ರಾಜನ್ ದೈವ ಉಬಾರ್ ಕಲ್ಕುಡ ಕಲ್ಲುರ್ಟಿ ಮೂಲ ಸ್ಥಾನದಲ್ಲಿ ಕಲ್ಕುಡ – ಕಲ್ಲುರ್ಟಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಫೆ 14, 15 ರಂದು ನಡೆಯಲಿದ್ದು, ಈ ಸಂಬಂಧ ಆಮಂತ್ರಣ ಪತ್ರವನ್ನು ಬುಧವಾರದಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.


ಈ ಸಂಧರ್ಭದಲ್ಲಿ ದೇವಳದ ವ್ಯವಸ್ಥಾಪಕರಾದ ವೆಂಕಟೇಶ್ ರಾವ್, ಉದ್ಯಮಿ ಲಕ್ಷ್ಮಣ್ ಮಣಿಯಾಣಿ, ಕಡವಿನಬಾಗಿಲು ಪಟೇಲ್ ಮನೆತನದ ಐ. ಕೇಶವ ನಾಯಕ್ , ಮೀರಾ ನಾಯಕ್, ಐ. ಚಂದ್ರಶೇಖರ್ ನಾಯಕ್, ರಾಘವ ನಾಯಕ್, ಗಣೇಶ್ , ಐ. ಪುಷ್ಪಾಕರ್ ನಾಯಕ್ , ಸುಧಾಕರ್ ನಾಯಕ್, ನಿತಿನ್ , ಗಣ್ಯರಾದ ಕೃಷ್ಣ ಪ್ರಸಾದ್ , ಸುಧಾಕರ ಶೆಟ್ಟಿ, ಗಿರೀಶ್, ಸುದರ್ಶನ ಭಟ್ , ಪದ್ಮನಾಭ , ಭವಾನಿ ಶಂಕರ್ ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here