ವಿಟ್ಲ: ಕಟ್ಟು ಹೊರುವ ಕೂಲಿ ಕಾರ್ಮಿಕನ ಸಾವು-ವಿಪರೀತ ಮದ್ಯ ಸೇವಿಸಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಸಂತೋಷ್‌

0

ವಿಟ್ಲ: ಕಟ್ಟು ಹೊರುವ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಕುಡಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ. ಇಲ್ಲಿನ ಲೀಲಾವತಿ ಆರ್ಕೆಡ್‌ ಹಿಂಭಾಗದಲ್ಲಿ ಕೂಲಿ ಕಾರ್ಮಿಕ ಸಂತೋಷ್‌ (54) ಎಂಬಾತ ಅತಿಯಾಗಿ ಮದ್ಯ ಕುಡಿದು ಬಿದ್ದು ಸಾವನ್ನಪ್ಪಿದ್ದಾರೆ.

ವಿಟ್ಲದಲ್ಲಿ ಕಟ್ಟು ಹೊರುವ ಕೂಲಿ ಕೆಲಸ ಮಾಡುತ್ತಿದ್ದ ಸಂತೋಷ್‌ ಅನಾರೋಗ್ಯದಿಂದ ಬಳಲುತ್ತಿದ್ದು, ವಿಪರೀತ ಮದ್ಯಪಾನ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಟ್ಲದ ಲೀಲಾವತಿ ಆರ್ಕೆಡ್‌ ಹಿಂಭಾಗದಲ್ಲಿ ಕುಡಿದು ಬಿದ್ದು ಸಾವನ್ನಪ್ಪಿರುವ ಸಂತೋಷ್‌ ನನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

LEAVE A REPLY

Please enter your comment!
Please enter your name here