ನೆಲ್ಯಾಡಿ-ಕೌಕ್ರಾಡಿ ವರ್ತಕರ ಸಂಘ-ಅಧ್ಯಕ್ಷ- ಸತೀಶ್ ಕೆ.ಎಸ್.ದುರ್ಗಾಶ್ರೀ , ಕಾರ್ಯದರ್ಶಿ-ಪ್ರಶಾಂತ್ ಸಿ.ಹೆಚ್. , ಉಪಾಧ್ಯಕ್ಷರು-ನಾಝೀಂ ಸಾಹೇಬ್, ಗಣೇಶ್ ರಶ್ಮಿ , ಕೋಶಾಧಿಕಾರಿ- ವಿ.ಜೆ.ಜೋಸೆಫ್

0



ನೆಲ್ಯಾಡಿ: ವರ್ತಕ ಹಾಗೂ ಕೈಗಾರಿಕಾ ಸಂಘ ನೆಲ್ಯಾಡಿ-ಕೌಕ್ರಾಡಿ ಇದರ ಅಧ್ಯಕ್ಷರಾಗಿ ಸತೀಶ್ ಕೆ.ಎಸ್.ದುರ್ಗಾಶ್ರೀ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ್ ಸಿ.ಎಚ್. ಆಯ್ಕೆಗೊಂಡಿದ್ದಾರೆ. ನೆಲ್ಯಾಡಿ ಡಿಯೋನ್ ಸ್ಕ್ವೇರ್‌ನಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ವಿ.ಜೆ. ಜೋಸೆಫ್, ಉಪಾಧ್ಯಕ್ಷರಾಗಿ ನಾಝಿಂ ಸಾಹೇಬ್ ಹಾಗೂ ಗಣೇಶ್ ರಶ್ಮಿ, ಜೊತೆ ಕಾರ್ಯದರ್ಶಿಯಾಗಿ ರವಿಕುಮಾರ್ ಸುರಕ್ಷಾ, ಸದಸ್ಯರಾಗಿ ರಾಜ ಎಂ., ಅಕ್ಬರ್ ಸಿದ್ದಿಕ್, ರಘುಲಾಲ್, ಅಬ್ದುಲ್ ಖಾದರ್, ಅಬ್ದುಲ್ ಲತೀಫ್, ಅಬ್ದುಲ್ ಜಬ್ಬಾರ್, ದಿನೇಶ್ ಟಿ.ಎಂ.., ಜಿನೋಯ್, ಶಾಂತರಾಮ್ ಶೆಟ್ಟಿ, ಕಾನೂನು ಸಲಹೆಗಾರರಾಗಿ ನೋಟರಿ ನ್ಯಾಯವಾದಿಗಳಾದ ಇಸ್ಮಾಯಿಲ್ ನೆಲ್ಯಾಡಿ, ಜೇಮ್ಸ್ ಪಿ.ವಿ., ನ್ಯಾಯವಾದಿ ವಿನೋದ್ ಅವರನ್ನು ಆಯ್ಕೆ ಮಾಡಲಾಯಿತು. ನಿರ್ಗಮನ ಅಧ್ಯಕ್ಷ ರಫೀಕ್ ಸೀಗಲ್ ಅವರನ್ನು ಗೌವರವಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರಾದ ಸರ್ವೋತ್ತಮ ಗೌಡ ಹಾಗೂ ವರ್ತಕರು ಸಭೆಯಲ್ಲಿ ಉಪಸ್ಥಿತರಿದ್ದರು. ಜ.31ರಂದು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

LEAVE A REPLY

Please enter your comment!
Please enter your name here