ಖಾಸಗಿ ಬಸ್ ನಿಂದ ಹೊರಗೆಸಯಲ್ಪಟ್ಟು ಮಹಿಳೆಗೆ ಗಾಯ – ಪ್ರಕರಣ ದಾಖಲು

0

ವಿಟ್ಲ: ಮಹಿಳೆಯೋರ್ವರು ಖಾಸಗಿ ಬಸ್ ನಿಂದ ಹೊರಕ್ಕೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ಮಾಣಿ ಸಮೀಪ ನಡೆದಿದ್ದು, ಈ ಬಗ್ಗೆ ಬಸ್ಸು ಚಾಲಕ ಹಾಗೂ ನಿರ್ವಾಹಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿ ನಿವಾಸಿ ಎಂ.ಸುನಿತಾರವರು ನೀಡಿರುವ ದೂರಿನಂತೆ ಖಾಸಗಿ ಬಸ್ ಚಾಲಕ ಅಬ್ದುಲ್ ಸಮದ್ ಹಾಗೂ ನಿರ್ವಾಹಕ ರಾಧಾಕೃಷ್ಣ ಬಳ್ಳಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.

ಜ.31 ರಂದು ಘಟನೆ ನಡೆದಿದ್ದು, ಅಬ್ದುಲ್ ಸಮದ್ ಎಂಬವರು ಚಲಾಯಿಸುತ್ತಿದ್ದ ಬಸ್ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಎಂಬಲ್ಲಿ ತಲುಪಿದಾಗ ಉಪ್ಪಿನಂಗಡಿ ನಿವಾಸಿ ರಾಧಾರವರು ಬಸ್ಸಿನ ಹಿಂಭಾಗದ ಬಾಗಿಲಿನ ಮೂಲಕ ಹೊರಕ್ಕೆಸೆಯಲ್ಪಟ್ಟಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಾಯಾಳು ಮಹಿಳೆಯ ಪುತ್ರಿ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here