ಆಲಂಕಾರು ಶ್ರೀ ದುರ್ಗಾ ಟವರ್ ್ಸ ನಲ್ಲಿರುವ ಸಾನಿಧ್ಯ ಮೊಬೈಲ್ ಅಂಗಡಿ ರಾತ್ರಿ ಬೀಗ ಮುರಿದು ಕಳ್ಳತನ- ಸಿ.ಸಿ ಟಿ.ವಿಯಲ್ಲಿ ಸೆರೆ – ಓರ್ವನ ಬಂಧನ

0

ಆಲಂಕಾರು: ಆಲಂಕಾರು ಶ್ರೀ ದುರ್ಗಾಟವರ್ ್ಸ ನಲ್ಲಿ ಕಾರ್ಯಚರಿಸುತ್ತಿದ್ದ ಸಾನಿಧ್ಯ ಮೊಬೈಲ್ ಅಂಗಡಿಯೊಂದಕ್ಕೆ ಫೆ.5 ರಂದು ರಾತ್ರಿ ಅಂದಾಜು 1:30 ಗಂಟೆಯ ಹೊತ್ತಿಗೆ ಅಂಗಡಿಯ ಎರಡು ಬೀಗಗಳನ್ನು ಏಕ್ಸೋ ಬ್ಲೇಡ್ ಮೂಲಕ ಕತ್ತರಿಸಿ ಮೊಬೈಲ್ ಹಾಗೂ ಹಣ ಕಳ್ಳತನ ಮಾಡಿದ ಘಟನೆ ನಡೆದಿದೆ.ಈ ಘಟನೆಗಳು ಸಿ.ಸಿ ಟಿವಿಯಲ್ಲಿ ವೀಡಿಯೋದ ಮೂಲಕ ಕಡಬ ಪೋಲಿಸರು ಪರೀಶಿಲನೆ ನಡೆಸಿದಾಗ ಆತ ಹೊರ ರಾಜ್ಯದಿಂದ ಬಂದಿದ್ದು ನೆಕ್ಕರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಹತ್ತಿರ ಇಟ್ಟಿಗೆ ಫ್ಯಾಕ್ಟರಿ ಯಲ್ಲಿ ಒಂದು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಪೋಲಿಸ್ ತನಿಖೆಯಿಂದ ಹೊರಬರಬೇಕಾಗಿದೆ.

LEAVE A REPLY

Please enter your comment!
Please enter your name here