ಕಾಣಿಯೂರಿನ ಯಕ್ಷಗಾನ ಅಭಿಮಾನಿಗಳಿಂದ ಧರ್ಮಸ್ಥಳ ಮೇಳದ ಚಂದ್ರಶೇಖರ ಅವರಿಗೆ ರಂಗರತ್ನಾಕರ ಬಿರುದು

0

ಕಾಣಿಯೂರು: ಕಾಣಿಯೂರಿನ ಜಾತ್ರಾ ಗದ್ದೆಯಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಧರ್ಮಸ್ಥಳ ಮೇಳದ ಪ್ರಮುಖ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಇವರಿಗೆ ಕಾಣಿಯೂರಿನ ಯಕ್ಷಗಾನ ಅಭಿಮಾನಿಗಳ ವತಿಯಿಂದ ರಂಗರತ್ನಾಕರ ಬಿರುದನ್ನು ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಯಕ್ಷಗಾನ ನಾಟ್ಯ ಗುರು ಲಕ್ಷ್ಮಣ ಗೌಡ ಬೆಳಾಲು ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಅಂಚೆ ಪ್ರಧಾನರಾದ ಸೀತಾರಾಮ ಗೌಡ ಮುಂಡಾಳ, ಹಿರಿಯ ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಯಕ್ಷಮಿತ್ರ ಬಳಗ ಕಾಣಿಯೂರು ಇದರ ಸಂಚಾಲಕ ಹರಿಪ್ರಸಾದ್ ರೈ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ, ಯಕ್ಷಮಿತ್ರ ಬಳಗದ ಬಾಲಚಂದ್ರ ಅಬೀರ, ಸೀತಾರಾಮ ಅನಿಲ, ಕಲಾವಿದ ಚರಣ್ ಗೌಡ ಕಟ್ಟತ್ತಾರು, ಮೇಳದ ವ್ಯವಸ್ಥಾಪಕ ಉಪಸ್ಥಿತರಿದ್ದರು.ಯಕ್ಷಗಾನ ಕಲಾವಿದ ಪ್ರಸಾದ್ ಸವಣೂರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here