ಆರ್ಲಪದವು ಪೂಮಾಣಿ-ಕಿನ್ನಿಮಾಣಿ , ಪಿಲಿಭೂತ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಆರ್ಲಪದವು ಪುಳಿತ್ತಡಿ ಬಳಗದಿಂದ ದೇಣಿಗೆ ಹಸ್ತಾಂತರ

0

ನಿಡ್ಪಳ್ಳಿ: ಪಾಣಾಜೆ ಜಾತ್ರೋತ್ಸವ ಸಂದರ್ಭದಲ್ಲಿ ಆರ್ಲಪದವು ದೈವಸ್ಥಾನದ  ವಠಾರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಜ.26 ರಂದು ಗೆಂದಗಿಡಿ ಎಂಬ ನಾಟಕ ಪ್ರಾಯೋಜಿಸಿದ  ಪುಳಿತ್ತಡಿ ಬಳಗ ಅದರಿಂದ  ಉಳಿತಾಯವಾದ ರೂ. 20,000 ಹಣವನ್ನು ಜಗನ್ಮೋಹನ್ ರೈ ಸೂರಂಬೈಲು ಹಾಗೂ ಶಿವಕುಮಾರ್ ಭಟ್ ಗುವೆಲುಗದ್ದೆ ಅವರ ಸಮ್ಮುಖದಲ್ಲಿ  ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೋಳಿಲ್ಲಾಯರವರಿಗೆ ಆರ್ಲಪದವು ಪುಳಿತ್ತಡಿ ಬಳಗದ ಸದಸ್ಯರು ಫೆ.13 ರಂದು ದೈವಸ್ಥಾನದಲ್ಲಿ ಹಸ್ತಾಂತರಿಸಿದರು.     

ಈ ಸಂದರ್ಭದಲ್ಲಿ ಪುಳಿತ್ತಡಿ ‌ಬಳಗದ  ನಂದಕುಮಾರ್  ಅರ್ಲಪದವು,  ಪ್ರಕಾಶ್ ಕುಲಾಲ್ ಆರ್ಲಪದವು, ಕಿಶೋರ್ ಕುಮಾರ್ ಆರ್ಲಪದವು, ಜಿ.ಎಸ್ ಹರೀಶ್ ಆರ್ಲಪದವು ಹಾಗೂ ಅಭಿ‌ ಆರ್ಲಪದವು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here