ಪರಣೆ: ಮಸೀದಿ ನವೀಕರಣಕ್ಕೆ ಶಿಲಾನ್ಯಾಸ

0

ಪುತ್ತೂರು: ಮಿಹ್ ರಾಜ್ ಜುಮ್ಮಾ ಮಸೀದಿ,ಪರಣೆ ಇದರ ನವೀಕರಣ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಮಸೀದಿಯ ಗೌರವಾಧ್ಯಕ್ಷರಾದ ಎನ್.ಪಿ.ಎಂ.ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ಫೆ.11ರಂದು ನೆರವೇರಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷ ಬಿ.ಕೆ .ಇಬ್ರಾಹಿಂ ಕುಂಭಮೂಲೆ ವಹಿಸಿದ್ದರು.

ವೇದಿಕೆಯಲ್ಲಿ ಮಸೀದಿಯ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ತೋಟದಮೂಲೆ,ಚಾಪಳ್ಳ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಉಮ್ಮರ್ ಹಾಜಿ ಕೆನರಾ,ಅಹಮ್ಮದ್ ಹಾಜಿ ಸವಣೂರು,ಉದ್ಯಮಿಗಳಾದ ಅಬೂಬಕ್ಕರ್ ಹಾಜಿ ಮಂಗಳ,ಅಬ್ದುಲ್‌ ಖಾದರ್ ಹಾಜಿ ಬಯಂಬಾಡಿ,ಮುರ್ಕೆತ್ತಿ ಅಬ್ಬಾಸ್ ,ಲತೀಫ್ ಗುರುಪುರ,ಅಬ್ದುಲ್ ರಹಿಮಾನ್ ಸಾಮೆತ್ತಡ್ಕ,ಇಂಜಿನಿಯರ್ ಶಿಯಾಬುದ್ದೀನ್,ಮುಹಲ್ಲಿಂ ಮುಹಮ್ಮದ್ ಹನೀಫಿ ಕಾಪೆಜಾಲ್,ಹೈದರ್ ಆಲಿ ಐವತ್ತೊಕ್ಲು, ಮಸೀದಿ ಆಡಳಿತ ಸಮಿತಿಯ ಪದಾಧಿಕಾರಿಗಳು,SKSSF ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ರಮ್ಲಾನ್ ಕುಂಭಮೂಲೆ ಅಧ್ಯಕ್ಷರಾಗಿ, ಅಬ್ಬುಂಞಿ ಅಬಾಬಿಲ್ ಉಪಾಧ್ಯಕ್ಷ,ಇಬ್ರಾಹಿಂ ಕೊಳಿ ಕಾರ್ಯದರ್ಶಿ, ಮುನೀರ್ ಮುಕ್ಕೂರು ಜತೆ ಕಾರ್ಯದರ್ಶಿ, ಕೆ.ಎಚ್.ಮಹಮ್ಮದ್ ಕೋಶಾಧಿಕಾರಿ ಮತ್ತು ಇತರ ಹತ್ತು ಮಂದಿ ಸದಸ್ಯರನ್ನೊಳಗೊಂಡ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು

.ಮಸೀದಿಯ ಖತೀಬರಾದ ಸಂಶುದ್ದೀನ್ ಫೈಝಿ ಮಾಪಾಳ್ ರವರು ಪ್ರಸ್ತಾವಿಕವಾಗಿ ಮಾತನಾಡಿ ,ಸ್ವಾಗತಿಸಿ,SKSSF ನ ಸಂ.ಕಾರ್ಯದರ್ಶಿ ಜಮಾಲುದ್ದೀನ್ ಅಝಹರಿ ವಂದಿಸಿದರು.

LEAVE A REPLY

Please enter your comment!
Please enter your name here