ಯುವ ಬಂಟರ ಸದಸ್ಯತ್ವ ಅಭಿಯಾನ ‘ಬನ್ನಿ ಸದಸ್ಯರಾಗೋಣ’

0

ಪುತ್ತೂರು: ತಾಲೂಕು ಯುವ ಬಂಟರ ಸಂಘದ ವತಿಯಿಂದ ‘ಬನ್ನಿ ಸದಸ್ಯರಾಗೋಣ’ ಎನ್ನುವ ಶೀರ್ಷಿಕೆಯಡಿಯಲ್ಲಿ ಯುವ ಬಂಟರ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ಫೆ.21ರಂದು ನೀಡಲಾಯಿತು. ಯುವ ಬಂಟರ ಸಂಘದ ನೂತನ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು ಮತ್ತು ನಿಕಟಪೂರ್ವ ಅಧ್ಷಕ್ಷ ಶಶಿರಾಜ್ ರೈ ಮುಂಡಾಳಗುತ್ತು ಜಂಟಿಯಾಗಿ ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮುಂದಿನ ಕೆಲವೇ ತಿಂಗಳಿನಲ್ಲಿ ಮೂರು ಸಾವಿರ ಮಂದಿ ಯುವ ಬಂಟರನ್ನು ಸದಸ್ಯರಾಗಿ ಸಂಘಕ್ಕೆ ಸೇರ್ಪಡೆಗೊಳಿಸುವ ಸಂಕಲ್ಪ ಮಾಡಿದ್ದೇವೆ ಎಂದರು.


ಪುತ್ತೂರು ತಾಲೂಕಿಗೆ ಒಳಪಟ್ಟ 45 ವರ್ಷ ಪ್ರಾಯದ ಒಳಗಿನ ಯುವ ಬಂಟರು ಸದಸ್ಯತ್ವವನ್ನು ಪಡೆಯಲು ಅರ್ಹರಾಗಿದ್ದು ಪುತ್ತೂರು ಬಂಟರ ಭವನದ ಕಛೇರಿಯಲ್ಲಿ ಆಧಾರ್‌ಕಾರ್ಡ್ ಜೆರಾಕ್ಸ್ ಭಾವಚಿತ್ರ ಮತ್ತು 100 ರೂ ನೋಂದಾವಣೆ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಸಂದರ್ಭದಲ್ಲಿ ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಂಜನಿ ಶೆಟ್ಟಿ, ಪ್ರಜ್ವಲ್ ರೈ ಸೊರಕೆ, ಕೋಶಾಧಿಕಾರಿ ರಂಜನ್ ರೈ ದೇರ್ಲ, ಜೊತೆ ಕಾರ್ಯದರ್ಶಿ ಶುಭ ರೈ ಮತ್ತು ಸಂಘದ ಹಿರಿಯ ಸದಸ್ಯರಾದ ಗಣೇಶ್ ಸೆಟ್ಟಿ ನೆಲ್ಲಿಕಟ್ಟೆ, ರವಿಪ್ರಸಾದ್ ಶೆಟ್ಟಿ ಮತ್ತು ಕಛೇರಿ ಸಹಾಯಕ ರವಿಚಂದ್ರ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here