ಫೆ.24-25: ಗುಮ್ಮಟೆಗದ್ದೆ ಪತ್ತನಡ್ಕ ಬಂಗೇರ ತರವಾಡು ಮನೆಯಲ್ಲಿ ಪ್ರತಿಷ್ಠಾ ಮಹೋತ್ಸವ-ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ

0

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಗುಮ್ಮಟೆಗದ್ದೆ ಪತ್ತನಡ್ಕ ಬಂಗೇರ ತರವಾಡು ಶ್ರೀಧೂಮಾವತಿ ಪರಿವಾರ ದೈವಗಳ ಟ್ರಸ್ಟ್ ಮತ್ತು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ಮತ್ತು ದೈವಗಳ ನೇಮೋತ್ಸವವು ಫೆ.24 ಹಾಗೂ 25ರಂದು ನಡೆಯಲಿದೆ.


ತಂತ್ರಿ ಕುಕ್ಕಾಜೆ ಶ್ರೀಕೃಷ್ಣ ಗುರೂಜಿಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಫೆ.24ರಂದು ಬೆಳಿಗ್ಗೆ ಗಣಪತಿ ಹೋಮ, ನಾಗ ತಂಬಿಲ, ಹರಿಸೇವೆ, ಮುಡಿಪು ಶುದ್ಧ, ಧೂಮಾವತಿ ಹಾಗೂ ಪರಿವಾರ ದೈವಗಳಿಗೆ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಸಂಜೆ ದೈವಗಳ ಭಂಡಾರ ತೆಗೆಯುವುದು, ನಂತರ ಧೂಮಾವತಿ ದೈವಕ್ಕೆ ಎಣ್ಣೆಬೂಲ್ಯ, ತೊಡಂಗಲ, ರಾತ್ರಿ ಕಲ್ಲಾಲ್ದ ಗುಳಿಗ ದೈವದ ನೇಮ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ರಾತ್ರಿ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳ ನೇಮ, ಫೆ.25ರಂದು ಧರ್ಮದೈವ ಶ್ರೀಧೂಮಾವತಿ ದೈವದ ನೇಮ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದ ಬಳಿಕ ಕೊರತ್ತಿ ದೈವದ ನೇಮ ನಡೆಯಲಿದೆ ಎಂದು ತರವಾಡು ಮನೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here