ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ” ಶಾಲೆ ಮತ್ತು ಸಂಸ್ಕಾರ ” ಕುರಿತು ಕಾರ್ಯಾಗಾರ

0

ಪುತ್ತೂರು :ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ” ಶಾಲೆ ಮತ್ತು ಸಂಸ್ಕಾರ ” ಕುರಿತು ಕಾರ್ಯಾಗಾರ ಫೆ.22ರಂದು ನಡೆಯಿತು.ವಿವೇಕಾನಂದ ವಿದ್ಯಾವರ್ಧಕ ಸಂಘ ಸಲಹಾ ಸಮಿತಿಯ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ”ವಿದ್ಯಾರ್ಥಿಗಳು ಸಮಾಜದಲ್ಲಿ ಸಂಸ್ಕಾರಯುತ ಶಿಕ್ಷಣ ಪಡೆಯುವಲ್ಲಿ ಹಾಗೂ ಜೀವನ ವಿಧಾನವನ್ನು ಅನುಸರಿಸುವಲ್ಲಿ ಸಂಸ್ಕಾರಯುತ ಶಾಲೆ ಮತ್ತು ಸಮಾಜ ಮುಖ್ಯ ಪಾತ್ರ ವಹಿಸುತ್ತದೆ” ಎಂದರು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಕಾರ್ಯದರ್ಶಿಗಳಾದ ಡಾ.ಕೆ.ಎಂ ಕೃಷ್ಣ ಭಟ್ ಮತ್ತು ಉಪಾಧ್ಯಕ್ಷ ಪಿ . ಸತೀಶ್ ರಾವ್ ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ.ಕೆ ಮತ್ತು ಸಂಚಾಲಕ ಭರತ್ ಪೈ, ಶಾಲೆಯ ಪ್ರಾಂಶುಪಾಲೆ ಸಿಂಧೂ.ವಿ.ಜಿ, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು,

LEAVE A REPLY

Please enter your comment!
Please enter your name here