ಆಲಂಕಾರು ಜೇಸಿಐ: ಎಲ್‌ಡಿಎಂಟಿ ತರಬೇತಿ ಕಾರ್ಯಾಗಾರ

0

ಕಡಬ: ಆಲಂಕಾರು ಜೆಸಿಐ ಸದಸ್ಯರಿಗೆ ಎಲ್‌ಡಿಎಂಟಿ ತರಬೇತಿ ಕಾರ್ಯಾಗಾರ ಮಾ.3ರಂದು ಆಲಂಕಾರು ಹೊಂಬೆಳಕು ಬಾಕಿಲ ಇಲ್ಲಿ ನಡೆಯಿತು.

ವಲಯ 15 ಪ್ರಾಂತ ಎ ಇದರ ವಲಯ ಉಪಾಧ್ಯಕ್ಷ ಅಭಿಷೇಕ್ ಜಿ.ಎಮ್ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು. ಸದಸ್ಯರ ಜವಾಬ್ದಾರಿಗಳು, ಕರ್ತವ್ಯದ ಬಗ್ಗೆ ಅವರು ತಿಳಿಸಿದರು. ವಲಯ ತರಬೇತಿ ವಿಭಾಗದ ನಿರ್ದೇಶಕ ಹೇಮಲತಾ ಪ್ರದೀಪ್, ಆಲಂಕಾರು ಘಟಕದ ಅಧ್ಯಕ್ಷ ಮಮತಾ ಅಂಬರಾಜೆ, ಕಾರ್ಯದರ್ಶಿ ಕೃತಿಕಾ ಗುರುಕಿರಣ್ ಶೆಟ್ಟಿ, ಮಹಿಳಾ ಜೇಸಿ ಅಧ್ಯಕ್ಷೆ ದೇವಕಿ ಹಿರಿಂಜ, ಜೂನಿಯರ್ ಜೆ ಸಿ ಅಧ್ಯಕ್ಷೆ ಧನ್ಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಾಪಕ ಅಧ್ಯಕ್ಷ ಬಿ.ಎಲ್.ಜನಾರ್ದನ, ಪೂರ್ವಾಧ್ಯಕ್ಷ ಪ್ರದೀಪ್ ಬಾಕಿಲ, ಗುರುಕಿರಣ್ ಶೆಟ್ಟಿ, ಪ್ರವೀಣ ಆಳ್ವ, ಜತೆ ಕಾರ್ಯದರ್ಶಿ ಧನ್ಯಶ್ರೀ ರೈ ಹಾಗೂ ಇನ್ನಿತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here