ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ

0

ಇಂತಹ ಪುಣ್ಯದ ಕಾರ್ಯಕ್ರಮ ಕ್ಷೇತ್ರದಲ್ಲಿ ನಡೆದಿರುವುದು ನಮ್ಮ ಸುಯೋಗ: ಕಣಿಯೂರು ಶ್ರೀ

ವಿಟ್ಲ: ಶ್ರೀ ಶಂಕರ ಸೇವಾ ಪ್ರತಿಷ್ಠಾನ (ರಿ.) ಕೋಟೆಕಾರು, ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನಮ್ ಶೃಂಗೇರಿ ಮಠ,  ಶ್ರೀ ಶಂಕರ ಸೇವಾ ಪ್ರತಿಷ್ಠಾನ ಬಂಟ್ವಾಳ ವಲಯ ಇದರ ವತಿಯಿಂದ ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ  ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಶಂಕರ ತತ್ತ್ವಪ್ರಸಾರ ಅಭಿಯಾನ ನಡೆಯಿತು.

ಸಾಯಂಕಾಲ ಶ್ರೀ ಚಾಮುಂಡೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು‌ ಉದ್ಘಾಟಿಸಿ ಆಶೀರ್ವಚನ ನೀಡಿ ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ನಡೆದಿರುವುದು ನಮ್ಮ ಯೋಗ ಭಾಗ್ಯ,

ಭಾರತದ ಆಧ್ಯಾತ್ಮಿಕ ಚಿಂತನೆಯ ಮೇರು ಪರ್ವತ  ಆಚಾರ್ಯ ಶಂಕರರ ತತ್ವ – ಚಿಂತನೆಗಳು ಸರ್ವರ ಬಾಳಿಗೆ ದಾರಿ ದೀಪವಾಗಲಿ , ಮುಂದಿನ ದಿನಗಳಲ್ಲಿ ಶ್ರೀ ಆಚಾರ್ಯ ಶಂಕರರ ಜನ್ಮ ದಿನಾಚರಣೆ ಅರ್ಥಬಧ್ದವಾಗಿ ಶ್ರೀ ಕ್ಷೇತ್ರದಲ್ಲಿ ಆಚರಿಸುವಂತಾಗಲಿ ಎಂದರು.

  ಶ್ರೀ ಕೈಯ್ಯೂರು ನಾರಾಯಣ ಭಟ್ ಇವರು ಶ್ರೀ ಶಂಕರ ತತ್ತ್ವ ಅಭಿಯಾನದ ಕುರಿತಾಗಿ ಉಪನ್ಯಾಸ ನೀಡಿದರು. ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದ ಪ್ರಧಾನ ಕಾರ್ಯದರ್ಶಿ ರಾಜಾರಾಮ ಐತಾಳ್ ಕಂದೂರುರವರು ಅಷ್ಟೋತ್ತರ ವಾಚನ ಮಾಡಿದರು.

ವೇದಿಕೆಯಲ್ಲಿ ಸಂಚಾಲಕರಾದ  ಎ. ಕೃಷ್ಣ ಶರ್ಮ ಬಿ. ಸಿ ರೋಡ್ , ಗೌರವ ಸಲಹೆಗಾರರಾದ  ರಾಮಕೃಷ್ಣ ನಾಯಕ್ ಕೋಕಳ ಮೊದಲಾದವರು ಉಪಸ್ಥಿತರಿದ್ದರು. ಹರ್ಷಿಕಾ ಕಣಿಯೂರು ಪ್ರಾರ್ಥಿಸಿ ,  ಚಂದ್ರಶೇಖರ ಕಣಿಯೂರು ಸ್ವಾಗತಿಸಿದರು, ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here