ಕೆಯ್ಯೂರು ಎರಬೈಲ್‌ನಲ್ಲಿ ಕಾಡಾನೆ ಪತ್ತೆ-ಜನರು ಆತಂಕಪಡಬೇಕಾಗಿಲ್ಲ- ಶಾಸಕ ಅಶೋಕ್ ರೈ

0

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಎರಬೈಲ್ ನಲ್ಲಿ ಕಾಡಾನೆಯೊಂದು ಪತ್ತೆಯಾಗಿದ್ದು ಅದನ್ನು‌ ಮರಳಿ ಕಾಡಿಗಟ್ಟುವ ಪ್ರಕ್ರಿಯೆ ಅರಣ್ಯ ಇಲಾಖೆಯಿಂದ ನಡೆಯುತ್ತಿದ್ದು ಜನ ಆತಂಕ ಪಡಬೇಕಾಗಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.


ಬುಧವಾರ ರಾತ್ರಿ ಕಾಡಾನೆ ಎರಬೈಲ್ ನಲ್ಲಿ ಕಂಡು ಬಂದ ಬಗ್ಗೆ ಜನರು ಇಲಾಖೆಗೆ ಮಾಹಿತಿ‌ ನೀಡಿದ್ದಾರೆ.‌ತಕ್ಷಣ ಅರಣ್ಯ ಇಲಾಖೆಯ‌ ಅಧಿಕಾರಿಗಳಿಗೆ ಕರೆ ಮಾಡಿ ಅನಾಹುತವಾಗದಂತೆ ಎಚ್ಚರದಿಂದ ಇರಬೇಕು ಮತ್ತು ಕಾಡಾನೆಯನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟುವ ಕೆಲಸವನ್ನು ಇಲಾಖೆ ಮಾಡಬೇಕೆಂದು ಸೂಚನೆ ನೀಡಿದ್ದೇನೆ.ಆನೆ ದಾರಿ ತಪ್ಪಿ ಬಂದಿರುವ ಸಾಧ್ಯತೆ ಇದ್ದು ಇದುವರೆಗೂ ಯಾರಿಗೂ ತೊಂದರೆ ನೀಡಿಲ್ಲ ಎಂದು ಶಾಸಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here