ಕಾವು ವಿಶ್ವಕರ್ಮ ಕೂಡೂವಳಿಕೆ ಅಧ್ಯಕ್ಷರಾಗಿ ಶ್ರೀನಿವಾಸ ಆಚಾರ್ಯ ಮತ್ತು ಕಾರ್ಯದರ್ಶಿಯಾಗಿ ಬಾಲಕೃಷ್ಣ ಆಚಾರ್ಯ ಮಳಿ 

0

ಬಡಗನ್ನೂರು: ಕಾವು ವಿಶ್ವಕರ್ಮ ಕೂಡೂವಳಿಕೆ ಕಾವು ವಲಯ ಇದರ ಮುಂದಿನ ಅವಧಿಯ ರಚನಾತ್ಮಕ ಚಟುವಟಿಕೆಗಳು ಮತ್ತು ಸಂಘಟನಾ ದೃಷ್ಟಿಯಿಂದ ನೂತನ ಪದಾಧಿಕಾರಿಗಳ ಆಯ್ಕೆಯು ಮೊಕ್ತೇಸರರಾದ ನಾರಾಯಣ ಆಚಾರ್ಯರ ಉಪಸ್ಥಿತಿಯಲ್ಲಿ ನಡೆಯಿತು.

ಕೂಡೂವಳಿಕೆಯ ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀನಿವಾಸ ಆಚಾರ್ಯ ಮತ್ತು ಕಾರ್ಯದರ್ಶಿಯಾಗಿ ಬಾಲಕೃಷ್ಣ ಆಚಾರ್ಯ ಮಳಿ ಇವರುಗಳು ಆಯ್ಕೆ ಮಾಡಲಾಯಿತು. ಜೊತೆಕಾರ್ಯದರ್ಶಿಯಾಗಿ ರವೀಂದ್ರ ಆಚಾರ್ಯ ಅರಿಯಡ್ಕ, ಖಜಾಂಚಿಯಾಗಿ ಜಯಕರ ಆಚಾರ್ಯ ಕುಂಬ್ರ ಇವರುಗಳನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಕೂಡೂವಳಿಕೆಯ ವೆಂಕಟ್ರಮಣ ಆಚಾರ್ಯ ಪೆರ್ಲಂಪಾಡಿ ಸೇರಿದಂತೆ ಎಲ್ಲಾ ಹಿರಿಯ-ಕಿರಿಯ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here