![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಆತೂರು : ಹಳೆನೆರoಕಿಯಲ್ಲಿ ನೂತನವಾಗಿ ನಿರ್ಮಿಸುವ ಮಸೀದಿಗೆ ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಇದರ ಅಧ್ಯಕ್ಷ ಸಯ್ಯದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್ ರವರಿಂದ ಜೂ.27ರಂದು ಶಿಲನ್ಯಾಸ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಖತೀಬ್ ಮುಹಮ್ಮದ್ ರಫೀಕ್ ಅರ್ಶದಿ, ಜಮಾಅತಿನ ಅಧ್ಯಕ್ಷ ಹಾಜಿ ಸುಲೈಮಾನ್ ಬೈಲಂಗಡಿ, ಕಾರ್ಯದರ್ಶಿ ಜಿ.ಆದಂ , ಕೋಶಾಧಿಕಾರಿ ರಫೀಕ್ ಪಾದೆ, ಕಟ್ಟಡ ಸಮಿತಿಯ ಚೇರ್ ಮ್ಯಾನ್ ಸುಲೈಮಾನ್ ನೂಜೋಲು, ಕಾರ್ಯದರ್ಶಿ ಅಬ್ದುಲ್ ರಝ್ಝಾಕ್ ದಾರಿಮಿ, ಊರೂಸ್ ಸಮಿತಿ ಅಧ್ಯಕ್ಷರಾದ ಆದಂ ಮೇಸ್ತ್ರಿ, ಕಾರ್ಯದರ್ಶಿ ಹಾರಿಸ್ ಎಂ.ಬಿ, ಬಿ ಎಸ್ ಎ ಅಧ್ಯಕ್ಷರಾದ ಇಕ್ಬಾಲ್ ಬೈಲಂಗಡಿ, ಕಾರ್ಯದರ್ಶಿ ಆಸಿಫ್ ಪಾದೆ, ಆತೂರು ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಬಿ ಕೆ ರಝಕ್, ಕಾರ್ಯದರ್ಶಿ ಜಿ ರಫೀಕ್, ಎಸ್ ಕೆ ಎಸ್ ಎಸ್ ಎಫ್ ಹಳೆನೇರೆಂಕಿ ಶಾಖೆ ಅಧ್ಯಕ್ಷರಾದ ಅಬ್ದುಲ್ ರಝ್ಝಾಕ್ ದಾರಿಮಿ ಬೈಲಂಗಡಿ, ಜಮಾಅತರು, ಊರ ಹಾಗು ಪರ ಊರಿನ ಮಹನೀಯರು ಉಪಸ್ಥಿತರಿದ್ದರು.