ಕುಮಾರಧಾರಾ ನದಿಯಲ್ಲಿ ಸಿಲುಕಿದ ವ್ಯಕ್ತಿ-ರಕ್ಷಣೆ

0

ಕಡಬ: ಪಂಜ ಸಮೀಪ ಪುಳಿಕುಕ್ಕು ಸೇತುವೆ ಬಳಿ ಕುಮಾರಧಾರಾ ನದಿಯಲ್ಲಿ ಸಿಲುಕಿದ ವ್ಯಕ್ತಿಯನ್ನು ರಕ್ಷಣಾ ದಳದವರು ಸ್ಥಳೀಯರ ನೆರವಿನೊಂದಿಗೆ ರಕ್ಷಿಸಿದ ಘಟನೆ ಜು.8ರಂದು ಬೆಳಿಗ್ಗೆ ನಡೆದಿದೆ.

ನದಿಯಲ್ಲಿ ಗಿಡಗಳ ಮಧ್ಯೆ ವ್ಯಕ್ತಿಯೊಬ್ಬರು ಬೊಬ್ಬೆ ಹೊಡೆಯುವುತ್ತಿರುವುದು ಕಂಡ ಸ್ಥಳೀಯರು ಕಡಬ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆ ಬಳಿಕ ರಕ್ಷಣಾ ದಳದವರು ಬಂದು ಸ್ಥಳೀಯರ ನೆರವಿನಿಂದ, ನದಿ ನೀರಲ್ಲಿ ಗೆಲ್ಲೊಂದನ್ನು ಹಿಡಿದುಕೊಂಡಿದ್ದ ಆ ವ್ಯಕ್ತಿಯನ್ನು ಮೇಲಕ್ಕೆತ್ತಿ ಕಡಬ ಆಸ್ಪತ್ರೆಗೆ ಸೇರಿಸಿದ್ದಾರೆ. ಆತ ಆಕಸ್ಮಿಕ ಬಿದ್ದಿರುವುದಾ? ಅಥವಾ ಹಾರಿರುವುದೋ ಎಂದು ತನಿಖೆ ಬಳಿಕ ತಿಳಿಯಬೇಕಿದೆ. ಬೆಂಗಳೂರಿನಿಂದ ಬಂದು ರವಿ ಎಂದು ಪರಿಚಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ಈ ವ್ಯಕ್ತಿಯನ್ನು ಪುಳಿಕುಕ್ಕು ಸಮೀಪ ಜನರು ಕಂಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here