ಖಾಝಿ ಕೂರ ತಂಙಳ್ ರವರ ನಿಧನಕ್ಕೆ ಎಚ್. ಮಹಮ್ಮದ್ ಆಲಿ ಸಂತಾಪ

0

ಪುತ್ತೂರು: ಬಹುಮಾನ್ಯರಾದ ಸುನ್ನಿ ನೇತಾರ ತಾಜುಲ್ ಉಲಮಾ ಬಿರುದಾಂಕಿತ ಉಳ್ಳಾಲ ತಂಙಳ್ ಅವರ ಸುಪುತ್ರ ಸಯ್ಯದ್ ಫಝಲ್ ಕೋಯಮ್ಮ ಕೂರತ್ ತಂಙಳ್ ಅವರು ಇಂದು ಅಗಲಿರುವ ವಿಷಯ ತಿಳಿದು ನಮಗೆಲ್ಲರಿಗೂ ಆಘಾತವಾಗಿದೆ ಎಂದು ಕಾಂಗ್ರೆಸ್ ನಾಯಕ ಎಚ್. ಮಹಮ್ಮದ್ ಆಲಿ ಸಂತಾಪ ವ್ಯಕ್ತಪಡಿಸಿದರು.
ಧಾರ್ಮಿಕ ಲೋಕದ ಮಹಾನ್ ಪಂಡಿತರಾದ ಕೂರ ತಂಗಳ್ ರವರ ನಿಧನವೂ ಸಮಾಜಕ್ಕೆ ಮತ್ತು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿರುತ್ತದೆ.
ಸರಳ ನಡೆ ನುಡಿಯ ವ್ಯಕ್ತಿತ್ವ ಹೊಂದಿರುವ ತಂಗಳ್ ಅವರ ಬಳಿ ಸರ್ವಧರ್ಮದ ಜನರು ಬಂದು ತಮ್ಮ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು ಎಂದು ಎಚ್. ಮಹಮ್ಮದ್ ಆಲಿ ಹೇಳಿದರು.

LEAVE A REPLY

Please enter your comment!
Please enter your name here