ಕೆಯ್ಯೂರು ಗ್ರಾಪಂ ಗ್ರಂಥಾಲಯಕ್ಕೆ ಕೊಡುಗೆ

0

ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್‌ನ ಸಾರ್ವಜನಿಕ ಗ್ರಂಥಾಲಯಕ್ಕೆ ಮಂಗಳೂರು ಭಾರತ್ ಆಗ್ರೋ ವೆಟ್ ಇಂಡಸ್ಟ್ರೀಸ್‌ನ ವತಿಯಿಂದ ಪುಸ್ತಕಗಳು ಹಾಗೂ ಕಪಾಟು ಅನ್ನು ಕೊಡುಗೆಯಾಗಿ ನೀಡಲಾಯಿತು. ಸುಮಾರು 35 ಸಾವಿರಕ್ಕೂ ಅಧಿಕ ವೆಚ್ಚದ ವಿವಿಧ ಪುಸ್ತಕಗಳು ಹಾಗೇ ಪುಸ್ತಕ ಇಡಲು ಸೂಕ್ತವಾದ ಕಪಾಟು ಅನ್ನು ಭಾರತ್ ಆಗ್ರೋ ವೆಟ್ ಇಂಡಸ್ಟ್ರೀಸ್‌ನ ಮ್ಯಾನೇಜರ್ ರಕ್ಷಿತ್ ಶೆಟ್ಟಿಯವರು ಗ್ರಂಥ ಪಾಲಕಿ ಅನುಷಾರವರಿಗೆ ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಸದಸ್ಯ ಬಟ್ಯಪ್ಪ ರೈ ದೇರ್ಲ, ನಿವೃತ್ತ ತಹಶೀಲ್ದಾರ್ ವಿಶ್ವನಾಥ ಪೂಜಾರಿ, ಗ್ರಾಮ ಸಹಾಯಕ ನಾರಾಯಣ್ ಹಾಗೂ ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here