ಜು 14- ಪುತ್ತೂರು ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘದ ವತಿಯಿಂದ ಉಚಿತ ಯೋಗ ಥೆರಪಿ, ಅರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ದ. ಕ ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ವಿಶ್ವಕರ್ಮ ವೈದ್ಯರ ಸಂಘ ಇದರ ಸಹಯೋಗದೊಂದಿಗೆ ದಿ. ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ಯ ಇವರ ಸಂಸ್ಮರಣೆ ಕಾರ್ಯಕ್ರಮ ಮತ್ತು ಕೆ.ಎಂ.ಸಿ ಅತ್ತಾವರ ಮತ್ತು ಯೇನಪೋಯ ಮೆಡಿಕಲ್ ಆಸ್ಪತ್ರೆ ದೇರಳಕಟ್ಟೆ ನುರಿತ ತಜ್ಞ ವೈದ್ಯರಿಂದ ಸಾರ್ವಜನಿಕರಿಗೆ ಉಚಿತ ಯೋಗ ಥೆರಪಿ ಹಾಗೂ ಅರೋಗ್ಯ ತಪಾಸಣಾ ಶಿಬಿರವು ಜು 14ರಂದು ಬೆಳಿಗ್ಗೆ 9.30ರಿಂದ ಪುತ್ತೂರು ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಜರಗಲಿದೆ.


ಮಧುಮೇಹ, ರಕ್ತಪರೀಕ್ಷೆ, ಇ.ಸಿ.ಜಿ, ಕಣ್ಣು ಪರೀಕ್ಷೆ, ಯೋಗ ಥೆರಪಿ ಮುಂತಾದ ಪರೀಕ್ಷೆಗಳು ಉಚಿತವಾಗಿ ನಡೆಯಲಿದ್ದು, ಸಾರ್ವಜನಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷರಾದ ಜನಾರ್ದನ ಆಚಾರ್ಯ ಕಾಣಿಯೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here