ನೆಲ್ಯಾಡಿ ಶ್ರೀರಾಮ ವಿದ್ಯಾಲಯ ವರಮಹಾಲಕ್ಷ್ಮೀ ಪೂಜಾ ಸಮಿತಿ – ಅಧ್ಯಕ್ಷೆ: ಸುಪ್ರಿತಾ, ಕಾರ್ಯದರ್ಶಿ: ಪ್ರೀತಾ, ಕೋಶಾಧಿಕಾರಿ: ಸುಮಲತಾ

0

ನೆಲ್ಯಾಡಿ: ನೆಲ್ಯಾಡಿ ಶ್ರೀರಾಮ ವಿದ್ಯಾಲಯ ಸೂರ್ಯನಗರ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷರಾಗಿ ಸುಪ್ರೀತಾ ರವಿಚಂದ್ರ, ಕಾರ್ಯದರ್ಶಿಯಾಗಿ ಪ್ರೀತಾರಮೇಶ್ ಹಾಗೂ ಕೋಶಾಧಿಕಾರಿಯಾಗಿ ಸುಮಲತಾ ಮೋಹನ್ ಆಯ್ಕೆಯಾಗಿದ್ದಾರೆ.

ಜು.18ರಂದು ವಿದ್ಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಿತಿ ರಚಿಸಲಾಯಿತು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸುಬ್ರಾಯ ಪುಣಚ, ಶಿಶುಮಂದಿರದ ಅಧ್ಯಕ್ಷೆ ಪುಷ್ಪಲತಾ ಜನಾರ್ದನ್, ಶಾಲಾ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಮಾತೃಮಂಡಳಿಯ ಸದಸ್ಯರು, ಪೋಷಕರು, ಮಾತಾಜಿವೃಂದದವರು ಉಪಸ್ಥಿತರಿದ್ದರು. ಶಾರದ ಮಾತಾಜಿ ಸ್ವಾಗತಿಸಿ, ವಿನ್ಯಶ್ರೀ ಮಾತಾಜಿ ವಂದಿಸಿದರು. ಯಶಸ್ವಿನಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here