ಪಾಲ್ತಾಡಿ : ಅಂಕತಡ್ಕದಲ್ಲಿ ಕಾರ್ಗಿಲ್ ವಿಜಯೋತ್ಸವ ,ಸಸಿ ನಾಟಿ

0

ಸವಣೂರು : ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆಯನ್ನು ಬಿಜೆಪಿ ಬೂತ್ 70ರ ವತಿಯಿಂದ ಪಾಲ್ತಾಡಿ ಗ್ರಾಮದ ಅಂಕತಡ್ಕ ರಿಕ್ಷಾ ತಂಗುದಾಣದ ಬಳಿ ಆಚರಿಸಲಾಯಿತು.ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಸಸಿ ನಾಟಿ ಮಾಡಲಾಯಿತು.ಹಿರಿಯ ಕಾರ್ಯಕರ್ತರಾದ ಗೋಪಾಲ ಮಣಿಯಾಣಿ ಕಾಪಿನಮೂಲೆ ಅವರು ಸಸಿ ನಾಟಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ. ಬಿ. ಕೆ, ಸುಳ್ಯ ಮಂಡಲ ಎಸ್. ಟಿ ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ,ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ತಾರಾನಾಥ್ ಕಾಯರ್ಗ, ಪಾಲ್ತಾಡಿ ಶಕ್ತಿ ಕೇಂದ್ರ ಪ್ರಮುಖ್ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ,ಪಾಲ್ತಾಡಿ ಬೂತ್ 70ರ ಅಧ್ಯಕ್ಷ, ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಮತ್ತು ಪಾಲ್ತಾಡಿ ಬೂತ್ 71 ರ  ಸಮಿತಿ ಅಧ್ಯಕ್ಷ ಜಯಪ್ರಶಾಂತ್ ಪಲ್ಲತಡ್ಕ,ಮಾಜಿ ಅಧ್ಯಕ್ಷ ಕರುಣಾಕರ ಸಾಲ್ಯಾನ್ ಕಲ್ಲಕಟ್ಟ,ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಚೇತನಾ ಶಿವಾನಂದ, ಹರೀಶ್. ಕೆ. ಭರತ್ ರೈ, ಅಂಕತಡ್ಕ ಫ್ರೆಂಡ್ಸ್ ಆಟೋ ಚಾಲಕ ಮಾಲಕ ಸಂಘದ ಸದಸ್ಯರು ,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here