ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನಲ್ಲಿ ನಾಯಕತ್ವ ತರಬೇತಿ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಾಯಕತ್ವ ತರಬೇತಿಯು ಆಯ್ಕೆಗೊಂಡ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ನಡೆಯಿತು.

ತರಬೇತು ನೀಡಿದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಗುಡ್ಡಪ್ಪ ಬಲ್ಯ ರವರು ಮಾತನಾಡಿ, ನಾಯಕತ್ವ ಎಂಬುದು ಒಂದು ಜವಾಬ್ದಾರಿ. ನಾಯಕತ್ವದ ಸಮರ್ಥ ನಿರ್ವಹಣೆ ಮಾಡಿದಾಗ ಎಲ್ಲವೂ ಸುಸ್ಥಿತಿಯಲ್ಲಿರುತ್ತದೆ. ನಾಯಕನ ಗುಣವೇ ತಾನು ಬೆಳೆಯುವುದು ಮತ್ತು ಇತರರನ್ನು ಬೆಳೆಸುವುದು. ಒಬ್ಬ ನಾಯಕನಿಗೆ ಎಲ್ಲಿ ಹೇಗೆ ವ್ಯವಹರಿಸಬೇಕು ಎಂಬ ಜ್ಞಾನ ಇದ್ದಾಗ, ವಿವಿಧ ಸವಲತ್ತುಗಳ ಸಮರ್ಪಕ ಬಳಕೆ ಮಾಡಲು ಸಾಧ್ಯ ಇದೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ಬೆಳೆಸುವ ಕುರಿತಾಗಿ ಮತ್ತು ಸಂಸದೀಯ ನಡಾವಳಿಗಳ ಕುರಿತಾಗಿ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ ಶುಭ ಹಾರೈಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೃಥ್ವಿರಾಜ ಸ್ವಾಗತಿಸಿ, ಕಾರ್ಯದರ್ಶಿ ಗ್ರೀಷ್ಮ ವಂದಿಸಿದರು.

LEAVE A REPLY

Please enter your comment!
Please enter your name here