ಶ್ರೀ ಕೃಷ್ಣಲೋಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ವಿವೇಕಾನಂದ ಶಿಶು ಮಂದಿರವು ನಂದಗೋಕುಲದಂತೆ ಬೆಳಗಲಿ: ಉಮೇಶ ನಾಯಕ್

ಪುತ್ತೂರು: ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ , ವಿವೇಕಾನಂದ ಶಿಶು ಮಂದಿರ ಪರ್ಲಡ್ಕ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಸಹಯೋಗದಲ್ಲಿ ನಡೆಯಲಿರುವ ಶ್ರೀ ಕೃಷ್ಣಲೋಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಉಮೇಶ ನಾಯಕ್ ರವರು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ‌ ಅವರು ಪುತ್ತೂರಿನ ಹೃದಯ ಭಾಗದಲ್ಲಿರುವ ವಿವೇಕಾನಂದ ಶಿಶು ಮಂದಿರವು ನಂದಗೋಕುಲದಂತೆ ಬೆಳಗಲಿ, ಶ್ರೀ ಕೃಷ್ಣ ಲೋಕ ಕಾರ್ಯಕ್ರಮವು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಜರಗಲಿ ಎಂದು ಶುಭ ಹಾರೈಸಿದರು. ಸಮಿತಿಯ ಗೌರವ ಅಧ್ಯಕ್ಷರಾದ ರಾಜೀ ಬಲರಾಮ್, ಶಿಶುಮಂದಿರದ ಅಧ್ಯಕ್ಷರಾದ ರಾಜಗೋಪಾಲ ಭಟ್, ಸಂಚಾಲಕರಾದ ಅಕ್ಷಯ್ ಕುಮಾರ್,
ಕೋಶಾಧಿಕಾರಿ ಶಶಿಪ್ರಭ, ಸದ್ಯರಾದ ಅಶೋಕ್ ಬಲ್ನಾಡು ಸೇರಿದಂತೆ ಎಲ್ಲಾ ಪದಾದಿಕಾರಿಗಳು ಉಪಸ್ಥಿತರಿದ್ದರು.
ಸಮಿತಿಯ ಪ್ರದಾನ ಕಾರ್ಯದರ್ಶಿ ಮೇಘನಾ ಪಾಣಾಜೆ ಸ್ವಾಗತಿಸಿ, ಸಮಿತಿಯ ಕೋಶಾಧಿಕಾರಿ ಕಿಶನ್ ಕುಮಾರ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಅಧ್ಯಕ್ಷರಾದ ಸಂತೋಷ ಕುಮಾರ್ ರೈ ವಂದಿಸಿದರು.

LEAVE A REPLY

Please enter your comment!
Please enter your name here