ಪುಣ್ಚಪ್ಪಾಡಿ : ಬಿಜೆಪಿ ಬೂತ್ 68 ಅಧ್ಯಕ್ಷರಾಗಿ ಧನ್‌ರಾಜ್ ಓಡಂತರ್ಯ,ಕಾರ್ಯದರ್ಶಿಯಾಗಿ ಪ್ರಶಾಂತ್ ಕುಮಾರ್ ಕೆ ಗುಂಡ್ಯಡ್ಕ

0

ಸವಣೂರು: ಪುಣ್ಚಪ್ಪಾಡಿ ಬಿಜೆಪಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 68ರ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ ನೇರೋಳಡ್ಕ ಗೌರಿಸದನ ಸಭಾಂಗಣದಲ್ಲಿ ನಡೆಯಿತು. ಸವಣೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ತಾರನಾಥ ಕಾಯರ್ಗರವರ ಅಧ್ಯಕ್ಷತೆ ವಹಿಸಿದ್ದರು.

ಬೂತ್ ಸಂಖ್ಯೆ 68ರ ಅಧ್ಯಕ್ಷರಾಗಿ ಧನ್‌ರಾಜ್ ಓಡಂತರ್ಯ, ಕಾರ್ಯದರ್ಶಿಯಾಗಿ ಪ್ರಶಾಂತ್ ಕುಮಾರ್ ಕೆ ಗುಂಡ್ಯಡ್ಕ, ಮತಗಟ್ಟೆ ಏಜೆಂಟ್ ಚೆನ್ನಪ್ಪ ಗೌಡ ಬುಡನಡ್ಕ, ಬಿಎಲ್2 ದಿವಾಕರ ಗುಂಡ್ಯಡ್ಕ, ಮಹಿಳಾ ಸದಸ್ಯೆ ಜಯಶ್ರೀ ಕುಚ್ಚೆಜಾಲು, ಎಸ್‌ಸಿ ಸದಸ್ಯರಾಗಿ ಬಾಬು ದೇವಸ್ಯ, ಎಸ್‌ಟಿ ಸದಸ್ಯರಾಗಿ ಮೋನಪ್ಪ ನಾಯ್ಕ ಜರಿನಾರು, ಓಬಿಸಿ ಸದಸ್ಯರಾಗಿ ಜನಾರ್ಧನ ಗೌಡ ಕಟ್ಟತ್ತಾರು, ಸದಸ್ಯರುಗಳಾಗಿ ಸೂರಪ್ಪ ಗೌಡ ಬದಿಯಡ್ಕ, ಶಿವಪ್ರಸಾದ್ ರೈ ಸಾರಕರೆ, ನಾರಾಯಣ ಗೌಡ ಪೂವ ಆಯ್ಕೆಯಾದರು.

ಸಭೆಯಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಗಿರಿಶಂಕರ ಸುಲಾಯ, ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಗಣೇಶ್ ನಿಡ್ವಣ್ಣಾಯ, ಸೀತಾಲಕ್ಷ್ಮಿ ಪೂಜಾರಿಮೂಲೆ, ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಹಾಲು ಉತ್ಪಾದಕರ ಸಹಕಾರಿ. ಸಂಘದ ಉಪಾಧ್ಯಕ್ಷೆ ಆಶಾ ರೈ ಕಲಾಯಿ, ಪಕ್ಷದ ಪ್ರಮುಖರಾದ ಲಿಂಗಪ್ಪ ರೈ ಚೆಂಬುತ್ತೋಡಿ, ನಾಗರಾಜ ನಿಡ್ವಣ್ಣಾಯ, ವೆಂಕಟೇಶ್ ಭಟ್ ಅಂಜಯ, ನಾಗೇಶ್ ಓಡಂತರ್ಯ ಮೊದಲಾದವರು ಉಪಸ್ಥಿತರಿದ್ದರು. ಪುಣ್ಚಪ್ಪಾಡಿ ಶಕ್ತಿಕೇಂದ್ರದ ಪ್ರಮುಖ್ ಮಹೇಶ್ ಕೆ ಸವಣೂರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here