ಬೊಟ್ಯಾಡಿ: ಧರೆ ಕುಸಿದು ತೋಡು ಬ್ಲಾಕ್, ತೋಟಗಳು ಜಲಾವೃತ

0

ಪುತ್ತೂರು: ಸರ್ವೆ ಗ್ರಾಮದ ಬೊಟ್ಯಾಡಿ ಎಂಬಲ್ಲಿ ಗುಡ್ಡದ ಮಣ್ಣು ಜರಿದು ಬಿದ್ದು ನೀರು ಹರಿಯುವ ತೋಡು ಬ್ಲಾಕ್ ಆಗಿದ್ದು ಸ್ಥಳೀಯ ತೋಟಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ.
ವಿಶ್ವನಾಥ ರೈ, ರವಿಚಂದ್ರ ನಾಯ್ಕ ಹಾಗೂ ಚಂದ್ರಹಾಸ ರೈ ಬೋಟ್ಯಾಡಿ ಎಂಬವರಿಗೆ ಸೇರಿದ ತೋಟಗಳಿಗೆ ತೋಡಿನ ನೀರು ಹರಿಯುತ್ತಿದ್ದು ತೋಟ ಜಲಾವೃತಗೊಂಡಿದೆ. ಸ್ಥಳಕ್ಕೆ ಮುಂಡೂರು ಗ್ರಾಪಂ ಸದಸ್ಯ ಪ್ರವೀಣ್ ನಾಯ್ಕ ನೆಕ್ಕಿತ್ತಡ್ಕ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here