ಒಡಿಯೂರು ಶ್ರೀಗಳ ಜನ್ಮದಿನ, ಗ್ರಾಮೋತ್ಸವಕ್ಕೆ ಪುತ್ತೂರಿನಲ್ಲಿ ವಿವಿಧ ಕಾರ್ಯಕ್ರಮ

0

ಪುತ್ತೂರು: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಗ್ರಾಮೋತ್ಸವದ ಪ್ರಯುಕ್ತ ಪುತ್ತೂರು ಡಾ. ಶಿವರಾಮ ಕಾರಂತ ಪ್ರೌಢಶಾಲಾ ಮಕ್ಕಳಿಗೆ ವಜ್ರಮಾತ ಮಹಿಳಾ ಮಂಡಳಿ ಪುತ್ತೂರು ಘಟಕ ಹಾಗೂ ಅಸಹಾಯಕರ ಸೇವಾ ಟ್ರಸ್ಟ್ ರಿ ಪುತ್ತೂರು ವತಿಯಿಂದ ಪೋಕ್ಸೋ ಕಾರ್ಯಕ್ರಮ ಆ.5 ರಂದು ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಪತ್ರಕರ್ತ ಸಂಶುದ್ದೀನ್ ಸಂಪ್ಯ ಭಾಗವಹಿಸಿದರು. ಡಾ ಶಿವರಾಮ ಕಾರಂತ ಮುಖ್ಯ ಶಿಕ್ಷಕಿ ಜಲಜಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ವಜ್ರಮಾತ ಹಾಗೂ ಅಸಹಾಯಕ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನ ರೈ ಸ್ವಾಗತಿಸಿ, ಶಿಕ್ಷಕ ನಾರಾಯಣ ವಂದಿಸಿದರು. ಶಿಕ್ಷಕ ಅಬ್ರಹಾಂ, ವಜ್ರಮಾತ ಕೋಶಾಧಿಕಾರಿ ಯಮುನಾ, ಸದಸ್ಯರಾದ ಪುಷ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here