ಮಂಗಳೂರು ಬೆಂಗಳೂರು ಪ್ರಾಯೋಗಿಕ ರೈಲು ಸಂಚಾರ ಯಶಸ್ವಿ-ಕೆಲ ದಿನಗಳ ಕಾಲ ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತ

0

ಪುತ್ತೂರು: ಮಂಗಳೂರು ಬೆಂಗಳೂರು ರೈಲು ಮಾರ್ಗದ ಎಡಕುಮೇರಿ ಕಡಗರವಳ್ಳಿ ನಡುವಿನ ದೋಣಿಹಗಲ್‌ನ ರೈಲುಮಾರ್ಗದಲ್ಲಿ ಸಂಭವಿಸಿದ ಭೂಕುಸಿತದಿಂದ ಹಾನಿಗೊಳಗಾದ ರೈಲು ಹಳಿ ದುರಸ್ಥಿ ಕಾಮಗಾರಿ ಅಂತಿಮಗೊಂಡಿದ್ದು ಮಂಗಳೂರು ಬೆಂಗಳೂರು ರೈಲು ಸಂಚಾರ ಆ.6ರಿಂದ ಪುನರಾರಂಭಗೊಳ್ಳಲಿದೆ.


ಬಾರೀ ಮಳೆಗೆ ಕೆಲವು ದಿನಗಳ ಹಿಂದೆ ಸಂಭವಿಸಿದ ಭೂಕುಸಿತದಿಂದ ಎಡಕುಮೇರಿ ಕಡಗರವಳ್ಳಿ ನಡುವಿನ ದೋಣಿಹಗಲ್‌ನ ರೈಲುಮಾರ್ಗದಲ್ಲಿ ರೈಲು ಹಳಿ ಹಾನಿಗೊಳಗಾದ ಕ್ಷಣದಿಂದ ದುರಸ್ಥಿ ಕಾರ್ಯ ಆರಂಭಿಸಲಾಗಿತ್ತು. ತಡೆಗೋಡೆ ನಿರ್ಮಾಣ ಮತ್ತು ಹಳಿ ಮರುಸ್ಥಾಪನೆ ಕಾರ್ಯ ಸೇರಿದಂತೆ ಆ.3ರಂದು ಕಾಮಗಾರಿ ಪೂರ್ಣಗೊಂಡಿತ್ತು. ಕಾಮಗಾರಿ ಅಂತಿಮಗೊಂಡ ಹಿನ್ನಲೆಯಲ್ಲಿ ಒಂದು ರೈಲು ಎಂಜಿನ್‌ನ್ನು ಪಾಯೋಗಿಕವಾಗಿ ನಿಧಾನವಾಗಿ ಸಂಚರಿಸಲಾಗಿದ್ದು ಅದು ಯಶಸ್ವಿಯಾಗಿದೆ. ಗೂಡ್ಸ್ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ಪ್ಯಾಸೆಂಜರ್ ರೈಲು ಸಂಚಾರವನ್ನು ಇನ್ನೂ ಎರಡು ಮೂರು ದಿನಗಳ ಕಾಲ ರದ್ದು ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here