ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಸಭೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಸಭೆ ಆ.10ರಂದು ಶಾಲಾ ಸಭಾಂಗಣದಲ್ಲಿ ಜರಗಿತು.


ಸಭೆಯಲ್ಲಿ ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಪ್ರದೀಪ್ ಬಿ.ಎಮ್, ಉಪಾಧ್ಯಕ್ಷರಾಗಿ ಕೆ.ಎ ಸುಲೈಮಾನ್, ಚೈತ್ರಾ ಎನ್, ಜೊತೆ ಕಾರ್ಯದರ್ಶಿಗಳಾಗಿ ಯತೀಶ್ ಪುತ್ಯ, ಜಯಶ್ರೀ ಹಾಗೂ ಸದಸ್ಯರಾಗಿ ನೀರಜ್ ಕುಮಾರ್, ಸುರೇಶ್ ಪಿ.ಜೆ, ಸೋಮಶೇಖರ ಶೆಟ್ಟಿ, ನಿವ್ಯ ಪಿ.ಎನ್, ಅರ್ಚನಾ ಬಿ.ಜೆ, ಮಧುಲಿಕ ಎಸ್ ಎಮ್ ಆಯ್ಕೆಗೊಂಡರು.

ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸತೀಶ್ ಭಟ್‌ರವರು ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಾದರೆ ಪೋಷಕರ ಪಾತ್ರ ಮತ್ತು ಶಿಸ್ತು ಭರಿತ ಮನೆಯ ವಾತಾವರಣ ಮುಖ್ಯ ಎಂದು ತಿಳಿಸಿದರು. ವೇದಿಕೆಯಲ್ಲಿ ಶಾಲಾ ಕಾರ್ಯದರ್ಶಿ ಸೇಸಪ್ಪ ರೈ, ಸಂಚಾಲಕ ಶಿವಪ್ರಸಾದ್ ಆಚಾರ್ಯ ಮತ್ತು ರಕ್ಷಕ ಶಿಕ್ಷಕ ಸಂಘದ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಪ್ರಾಂಶುಪಾಲ ಪ್ರವೀದ್ ಸ್ವಾಗತಿಸಿ, ಶಾಲೆಯ ಬಗ್ಗೆ ಕಿರುಪರಿಚಯ ನೀಡಿದರು. ಚಂದ್ರಕಲಾ ವಂದಿಸಿದರು. ಸಹಶಿಕ್ಷಕಿ ರಜನಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಆರನೇ ತರಗತಿಯ ಶರ್ವಾಣಿ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here