ಸಂಪ್ಯ ಮುಹ್ಯಿದ್ದೀನ್ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0

ಪುತ್ತೂರು: ದಾರುಲ್ ಉಲೂಂ ಮದರಸ ಸಂಪ್ಯ ವತಿಯಿಂದ  ಇಂದು 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಸಂಪ್ಯ ಮಸೀದಿ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹ್ಯಿದ್ದೀನ್ ಜುಮಾ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಜಲೀಲ್ ಹಾಜಿ ವಹಿಸಿ ಧ್ವಜಾರೋಹಣ ನೆರೆವೇರಿಸಿದರು. ಸಂಪ್ಯ ಮಸೀದಿಯ ಖತೀಬ ಅಲ್-ಹಾಜಿ ಅಬ್ದುಲ್ ಹಮೀದ್ ದಾರಿಮಿ ಉಸ್ತಾದರು ದುಆ ಮಾಡಿ ಸಂದೇಶ ಭಾಷಣ ಮಾಡಿದರು.ದಾರುಲ್ ಉಲೂಂ ಮದರಸ ಸಂಪ್ಯ ಇದರ ಪ್ರ.ಅಧ್ಯಾಪಕ ರಿಯಾಝ್ ಅಸ್ಲಮಿ ಉಸ್ತಾದರು ಸ್ವಾಗತಿಸಿ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಪವರ್’ಮ್ಯಾನ್’ ಪೀರು ನಾಯಕ್ ಹಾಗೂ ಚಂದ್ರಶೇಖರ್ ಮೆಸ್ತಾಕ್ ಅವರನ್ನು ಗುರುತಿಸಿ ಎಸ್ಕೆಎಸ್ಎಸ್ಎಫ್ ಸಂಪ್ಯ ಶಾಖೆ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದಾರುಲ್ ಉಲೂಂ ಮದರಸ ಅಧ್ಯಾಪಕ ಸ್ವಾದಿಕ್ ಹನೀಫಿ ಉಸ್ತಾದ್,ಅಬ್ಬಾಸ್ ದಾರಿಮಿ,ಅಶ್ರಫ್ ಯಮನಿ,ಹುಸೈನ್ ಫೈಝಿ ಉಸ್ತಾದ್ ಜಮಾಅತ್ ಕಮಿಟಿ ಪ್ರ.ಕಾರ್ಯದರ್ಶಿ ಅಬೂಬಕ್ಕರ್ ಕಲ್ಲರ್ಪೆ,ಉಪಾಧ್ಯಕ್ಷ ಅಬೂಬಕ್ಕರ್ ಹಾಜಿ ,ಸ್ವಲಾತ್ ಕಮಿಟಿ ಅಧ್ಯಕ್ಷ ಸಂಶುದ್ದೀನ್ ಸಂಪ್ಯ,ಎಸ್ಕೆಎಸ್ಎಸ್ಎಫ್ ಸಂಪ್ಯ ಶಾಖೆಯ ಅಧ್ಯಕ್ಷ ಇಸ್ಮಾಯಿಲ್ ಡಿಂಬ್ರಿ ,ಮೆನೆಜ್ಮೆಂಟ್ ಸದಸ್ಯರಾದ ಹುಸೈನ್ ನಂದಿನಿ,ನಿಸಾರ್ ಅಹ್ಮದ್ ಹಾಗೂ ಸ್ಥಳೀಯ ನಿವಾಸಿಗಳು ಕಮಿಟಿ ಪದಾಧಿಕಾರಿಗಳು ಮದರಸ ವಿಧ್ಯಾರ್ಥಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here