ಪಾದೆಬಂಬಿಲ : ಶ್ರೀ ದುರ್ಗಾಭಜನಾ ಮಂದಿರದಲ್ಲಿ ಆಟಿದ ಕೂಟ

0

ಸವಣೂರು : ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿನಗರ ಶ್ರೀ ದುರ್ಗಾ ಭಜನಾ ಮಂಡಳಿಯ ವತಿಯಿಂದ ಭಜನಾ ಮಂದಿರದ ಆವರಣದಲ್ಲಿ ಆಟಿದ ತೆನಸ್‌ಲ್ ಬೊಕ್ಕ ವಣಸ್ ಕಾರ್ಯಕ್ರಮ ನಡೆಯಿತು.ದೈವ ಮಧ್ಯಸ್ಥರಾದ ಕೆ.ಬಾಲಕೃಷ್ಣ ಪೂಜಾರಿ ಪಲ್ಲತ್ತಾರು ಅವರು ಆಟಿ ತಿಂಗಳ ವೈಶಿಷ್ಟ್ಯ ಹಾಗೂ ಮಹತ್ವದ ಬಗ್ಗೆ ತಿಳಿಸಿದರು.

ಒಡಿಯೂರು ಗ್ರಾಮ ವಿಕಾಸ ಯೋಜನೆಯ ಕಡಬ ತಾಲೂಕು ಸಂಯೋಜಕಿ ಕಾವ್ಯಲಕ್ಷ್ಮೀ ಅವರು ಶುಭಹಾರೈಸಿದರು.ವೇದಿಕೆಯಲ್ಲಿ ಅತಿಥಿಗಳಾಗಿ ಹಿರಿಯರಾದ ಗಂಗಯ್ಯ ಗೌಡ ಪರಣೆ, ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ಅಂಗಡಿಮೂಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ, ಸ್ಥಾಪಕಾಧ್ಯಕ್ಷ ಸೋಮಪ್ಪ ಗೌಡ ಜಾರಿಗೆತ್ತಡಿ,ಜತೆ ಕಾರ್ಯದರ್ಶಿ ಬಾಲಕೃಷ್ಣ ಬಿ.ಕೆ ಹಾಗೂ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.ಆಟಿದ ಕೂಟದ ಅಂಗವಾಗಿ ನಡೆದ ಕ್ರೀಡಾಕೂಟಕ್ಕೆ ಹಿರಿಯರಾದ ಕೊರಗಪ್ಪ ಗೌಡ ಅಂಗಡಿಮೂಲೆ ಚಾಲನೆ ನೀಡಿದರು.

ಭಜನಾ ಮಂಡಳಿಯ ಕೋಶಾಧಿಕಾರಿ ಪುಟ್ಟಣ್ಣ ಪರಣೆ ಸ್ವಾಗತಿಸಿ, ಕಾರ್ಯದರ್ಶಿ ಹೊನ್ನಪ್ಪ ಗೌಡ ಜಾರಿಗೆತ್ತಡಿ ವಂದಿಸಿದರು. ಸದಸ್ಯೆ ವಾಣಿ ಶ್ರೀ ಎ.ಎಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here