ವಿದ್ಯಾಭಾರತಿ ಕಬಡ್ಡಿ – ಶ್ರೀ ಭಾರತಿ ಶಾಲಾ ಬಾಲಕಿಯರ ಕಬಡ್ಡಿ ತಂಡ ಸೌತ್ ಝೋನ್ ಗೆ ಆಯ್ಕೆ

0

ಆಲಂಕಾರು: ಹಾಸನದ ಮಂಗಳೂರು ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾಭಾರತಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಆ.16ರಂದು ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ 14ರ ವಯೋಮಾನದ ಬಾಲಕಿಯರ ತಂಡ ಫೈನಲ್ ಪಂದ್ಯಾಟದಲ್ಲಿ ಬೆಂಗಳೂರು ತಂಡವನ್ನು ಸೋಲಿಸಿ ಸೆಪ್ಟೆಂಬರ್ 16ಕ್ಕೆ ಆಂಧ್ರಪ್ರದೇಶದಲ್ಲಿ ನಡೆಯಲಿರುವ ಸೌತ್ ಝೋನ್ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ. ತಂಡದಲ್ಲಿ ನಾಯಕಿಯಾಗಿ ಕನ್ನಡ ಮಾಧ್ಯಮ ವಿಭಾಗದ ಭುವಿ ಕುಂಟ್ಯಾನ, ಸಹ ಆಟಗಾರ್ತಿಯರಾಗಿ ಶ್ರದ್ಧಾ ಕುಂಟ್ಯಾನ, ತೃ಼ಷಾ ಚಾರ್ವಕ, ಆಂಗ್ಲಮಾಧ್ಯಮ ವಿಭಾಗದ ಜನನಿ ಪಜ್ಜಡ್ಕ, ಧನ್ಯ ಶ್ರೀ ಅರ್ಬಿ, ಧ್ರುವಿ ಬಾಕಿಲ-ಚಾರ್ವಾಕ, ಸಾತ್ವಿಕ ಕೆದ್ದೊಟ್ಟೆ, ತೃ಼ಷಾ ಎಲಿಮಲೆ ಭಾಗವಹಿಸಿದ್ದರು. ತಂಡದ ಸಾಧನೆಯ ಹಿಂದೆ ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್, ಟೀಮ್ ಮೇನೆಜರ್ ಶಿಕ್ಷಕ ಚಂದ್ರಹಾಸ ಕುಂಟ್ಯಾನ ಶ್ರಮಿಸಿದ್ದರು. ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪಾಲಕ ವೃಂದ ಸಹಕರಿಸಿದ್ದರು.

LEAVE A REPLY

Please enter your comment!
Please enter your name here