ಭಾಸ್ಕರ ರೈ ಇಳಂತಾಜೆ ಅವರಿಗೆ ನುಡಿನಮನ

0

ಪುತ್ತೂರು: ಆ.7ರಂದು ನಿಧನರಾದ ಪ್ರಗತಿಪರ ಕೃಷಿಕ ಕೆಯ್ಯೂರು ಪೊಯ್ಯೋಳೆ ನಿವಾಸಿ ಭಾಸ್ಕರ ರೈ ಇಳಂತಾಜೆ ಇವರ ಉತ್ತರಕ್ರಿಯೆ ಮತ್ತು ನುಡಿನಮನ ಕಾರ್ಯಕ್ರಮ ಆ.18ರಂದು ಮೃತರ ಸ್ವಗೃಹದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಕಡಮಜಲು ಸುಭಾಷ್ ರೈ ಅವರು ನುಡಿ ನಮನ ಸಲ್ಲಿಸಿ, ‘ಶ್ರಮಜೀವಿಯಾಗಿದ್ದ ಹಾಗೂ ಸರಳ ಸಜ್ಜನಿಕೆ ವ್ಯಕ್ತಿತ್ವದ ಭಾಸ್ಕರ ರೈ ಅವರು ತಮ್ಮ ಸ್ವಪ್ರಯತ್ನದಿಂದ ಓರ್ವ ಪ್ರಗತಿಪರ ಕೃಷಿಕರಾಗಿ ಬೆಳೆದು ನಿಂತ ರೀತಿ ಎಲ್ಲರಿಗೂ ಮಾದರಿಯಾಗಿದೆ’ ಎಂದರು. ಈ ಸಂದರ್ಭದಲ್ಲಿ ಮೃತರ ಪತ್ನಿ ಗುಲಾಬಿ ರೈ, ಪುತ್ರ ಸುನಿಲ್ ರೈ, ಸೊಸೆ ಪ್ರತಿಮಾ ರೈ, ಪುತ್ರಿ ತ್ರಿವೇಣಿ ರೈ, ಅಳಿಯ ರಾಜ್ ಮನೋಹರ್ ರೈ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು, ಅಗಲಿದ ಚೇತನಕ್ಕೆ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here