ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನ ಹಿರಿಯ ಸದಸ್ಯ ಕೆ ಹರಿಣಾಕ್ಷರಿಗೆ ಸನ್ಮಾನ

0

ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನ ಮಹಾಸಭೆಯಂದು ಅನಾರೋಗ್ಯದ ಹಿನ್ನಲೆಯಲ್ಲಿ ಸಭೆಗೆ ಆಗಮಿಸಲಾಗದ ಬ್ಯಾಂಕಿನ ಹಿರಿಯ ಸದಸ್ಯ ಕೆ ಹರಿಣಾಕ್ಷ ಅವರಿಗೆ ಆ.19 ರಂದು ಅವರ ನಿವಾಸದಲ್ಲಿ ಬ್ಯಾಂಕ್ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಮಹಾಸಭೆಯಲ್ಲಿ ಬ್ಯಾಂಕಿನ ಹಿರಿಯ ಸದಸ್ಯರ ಸನ್ಮಾನ ಕಾರ್ಯ ಕ್ರಮದಡಿಯಲ್ಲಿ ಈ ಸನ್ಮಾನ ನೆರವೇರಿಸಲಾಗಿದ್ದು, ಬ್ಯಾಂಕ್ ನ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಕಿರಣ್ ಕುಮಾರ್ ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ಶೇಖರ್ ಶೆಟ್ಟಿ, ಅಧಿಕಾರಿ ಚಿದಂಬರ, ಸಿಬ್ಬಂದಿ ಉದಯ ಕುಮಾರ ಬಲ್ಲಾಳ ಜೊತೆಯಾಗಿ ಹರಿಣಾಕ್ಷ ಅವರನ್ನು ಸನ್ಮಾನಿಸಿದರು. ಈ ಸಂದರ್ಭ ಹರಿಣಾಕ್ಷ ಅವರ ಮನೆ ಮಂದಿ ಕೆ ಶ್ರೀಪಾದ, ಶಶಿಕಲಾ, ಪದ್ಮನಾಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here