ಸಂಪ್ಯ ನವಚೇತನ ಯುವಕ ಮಂಡಲದ ಮಾಜಿ ಅಧ್ಯಕ್ಷ ದಿ.ಸೀತಾರಾಮ ಶೆಟ್ಟಿ ಸ್ಮರಣಾರ್ಥ ಯುವಕ ಮಂಡಲದಿಂದ ರಕ್ತದಾನ ಶಿಬಿರ

0

ಪುತ್ತೂರು:ಸಂಪ್ಯ ನವಚೇತನ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದ ದಿ.ಸೀತಾರಾಮ ಶೆಟ್ಟಿ ಕಂಬಳತ್ತಡ್ಡರವರ ಪ್ರಥಮ ವರ್ಷದ ಸ್ಮರಣಾರ್ಥವಾಗಿ ಯುವಕ ಮಂಡಲದ ವತಿಯಿಂದ ಬೃಹತ್ ರಕ್ತದಾನ ಶಿಬಿರವು ಆ.23ರಂದು ರೋಟರಿ ಬ್ಲಡ್ ಬ್ಯಾಂಕ್‌ನಲ್ಲಿ ನೆರವೇರಿತು.


ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಯುವಕ ಮಂಡಲದ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸಾಮಾಜಿಕವಾಗಿ ತೊಡಿಗಿಸಿಕೊಂಡಿದ್ದ ಸೀತಾರಾಮ ಶೆಟ್ಟಿಯವರು ಸದಾ ಇನ್ನೊಬ್ಬರ ಸೇವೆಯಲ್ಲಿ ತಲ್ಲೀನರಾಗುತ್ತಿದ್ದರು. ಯುವಕ ಮಂಡಲ ಹಾಗೂ ದೇವಸ್ಥಾನಗಳ ಮೂಲಕ ಎಲ್ಲಾ ಸೇವೆಗಳಲ್ಲಿಯೂ ತೊಡಗಿಸಿಕೊಂಡಿದ್ದವರು. ತನ್ನ ಕೆಲಸ, ಮನೆಯ ಕೆಲಸ ಬಿಟ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಸ್ಪೂರ್ತಿ ಎಲ್ಲರಿಗೂ ಮಾದರಿ. ಅವರ ಹೆಸರಿನಲ್ಲಿ ನಡೆಯುವ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದರು.


ನವಚೇತನ ಯುವಕ ಮಂಡಲದ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್. ಮಾತನಾಡಿ, ನವಚೇತನ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದ ಸೀತಾರಾಮ ಶೆಟ್ಟಿಯವರು ಸಣ್ಣ ವಯಸ್ಸಿನಲ್ಲೇ ದೇವರ ಪಾದ ಸೇರಿದ್ದಾರೆ. ಅವರ ಸ್ಮರಣೆ ಸದಾ ನಮ್ಮ ಮನಸ್ಸಿನಲ್ಲಿದೆ. ಎಲ್ಲರೊಂದಿಗೂ ಒಡನಾಡಿಯಾಗಿದ್ದ ಅವರ ಸೇವಾ ಮನೋಭಾವನೆ ಸಮಾಜಕ್ಕೆ ಪ್ರೇರಣೆಯಾಗಿದ್ದವರು ಎಂದರು.


ನವಚೇತನ ಯುವಕ ಮಂಡಲದ ಅಧ್ಯಕ್ಷರು, ಸೀತಾರಾಮ ಶೆಟ್ಟಿಯವರ ಸಹೋದರ ಜಯಂತ ಶೆಟ್ಟಿ ಕಂಬಳತ್ತಡ್ಡ ಮಾತನಾಡಿ, ಸೀತಾರಾಮ ಶೆಟ್ಟಿ ಇಂದು ನಮ್ಮೊಂದಿಗಿಲ್ಲ. ಆದರೆ ಊರವರ, ಯುವಕ ಮಂಡಲದ ಸಹಕಾರ ನೋಡಿದಾಗ ಅವರು ಸದಾ ನಮ್ಮೊಂದಿಗಿದ್ದಾನೆ ಎಂಬ ಭಾವನೆ ನಮ್ಮಲ್ಲಿ ಮೂಡುತ್ತಿದೆ. ಯುವಕ ಮಂಡಲ, ಊರವರ ಸಹಕಾರ ನಮಗೆ ನಿರಂತರವಾಗಿದೆ. ಯಾರೂ ನಮ್ಮನ್ನು ಬಿಟ್ಟು ಹಾಕಿಲ್ಲ ಎಂದು ತಿಳಿಸಿದರು.


ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಲಕ್ಷ್ಮಣ್ ಬೈಲಾಡಿ, ಜಯಕುಮಾರ್ ನಾಯರ್, ವಿನ್ಯಾಸ್ ಯು.ಎಸ್., ಸೀತಾರಾಮ ಶೆಟ್ಟಿಯವರ ಪತ್ನಿ ಪ್ರಮೀಳಾ. ಸಹೋದರ ರವೀಂದ್ರ ಶೆಟ್ಟಿ, ನಾಗೇಶ್ ಸಂಪ್ಯ, ಗಣೇಶ್ ಸಂಪ್ಯ, ತೇಜಸ್ ಸಂಪ್ಯ, ಪವನ್ ಶೆಟ್ಟಿ ಕಂಬಳತ್ತಡ್ಡ, ಪ್ರಜನ್ ಶೆಟ್ಟಿ ಕಂಬಳತ್ತಡ್ಡ, ಸಂಜಿತ್ ರೈ, ಬ್ಲಡ್ ಬ್ಯಾಂಕ್‌ನ ಸಜನಿ ಸೇರಿದಂತೆ ಯುವಕ ಮಂಡಲದ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು. ನವಚೇತನ ಯುವಕ ಮಂಡಲದ ಮಾಜಿ ಕಾರ್ಯದರ್ಶಿ ಉಮೇಶ್ ಎಸ್.ಕೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here