ಮೆಸ್ಕಾಂ ಈಶ್ವರಮಂಗಲ ಶಾಖೆಯ ನಾಗೇಶ್‌ರಿಗೆ ಭಡ್ತಿ ಹೊಂದಿ ಕಛೇರಿ ಮೇಲ್ವಿಚಾರಕರಾಗಿ ಸುಳ್ಯದ ಆರಂತೋಡು ಶಾಖೆಗೆ ವರ್ಗಾವಣೆ

0

ಪುತ್ತೂರು: ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಈಶ್ವರಮಂಗಲ ಶಾಖೆಯಲ್ಲಿ ಮೆಕ್ಯಾನಿಕ್ ಗ್ರೇಡ್|| ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಶ್ ಕೆ.ಎಸ್.ರವರು ಕಛೇರಿ ಮೇಲ್ವಿಚಾರಕರಾಗಿ ಭಡ್ತಿಗೊಂಡು ಸುಳ್ಯ ಉಪ ವಿಭಾಗದ ಆರಂತೋಡು ಶಾಖೆಗೆ ವರ್ಗಾವಣೆಗೊಂಡಿದ್ದಾರೆ.

ಇವರು ಪುತ್ತೂರು, ಕುಂಬ್ರ ಶಾಖೆಯಲ್ಲಿ ಸಹಾಯಕ ಪವರ್ ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. 2007 ಸೆಪ್ಟೆಂಬರ್ 12ರಂದು ಪುತ್ತೂರು ಶಾಖೆಗೆ ಸಹಾಯಕ ಲೈನ್‌ಮ್ಯಾನ್ ಆಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ನಂತರ 2008-2009 ರ ತನಕ ಕುಂಬ್ರ ಶಾಖೆಯಲ್ಲಿ ಸಹಾಯಕ ಲೈನ್‌ಮ್ಯಾನ್ ಆಗಿ, 2009 ರಿಂದ 2024 ರ ತನಕ ಈಶ್ವರಮಂಗಲ ಶಾಖೆಯಲ್ಲಿ ಪವರ್‌ಮಾನ್, ಕಚೇರಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು. ತನ್ನ ಅತ್ಯುತ್ತಮ ಸೇವೆಯಿಂದಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಇವರು ಇತ್ತೀಚೆಗೆ ವರಮಹಾಲಕ್ಷ್ಮಿ ಸಮಿತಿ ಈಶ್ವರಮಂಗಲ ಮತ್ತು ಸುನ್ನಿ ಸೆಂಟರ್ ಈಶ್ವರಮಂಗಲದ ವತಿಯಿಂದ ಸನ್ಮಾನಗಳನ್ನು ಪಡೆದುಕೊಂಡಿದ್ದರು.

ಮೂಲತಃ ಸುಳ್ಯದ ಮಂಡೆಕೋಲು ಗ್ರಾಮದ ಕುಕ್ಕುಡೇಲು ಶೇಷಪ್ಪ ಗೌಡರವರ ಪುತ್ರರಾದ ಇವರು ಪತ್ನಿ ಮಮತಾ, ಪುತ್ರಿ ವಿಯಾಂಶಿರವರೊಂದಿಗೆ ಪ್ರಸ್ತುತ ಪುತ್ತೂರಿನ ಪರ್ಪುಂಜದಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here