ಮೆಸ್ಕಾಂ ಉಪ್ಪಿನಂಗಡಿ ಶಾಖೆಯ ದುರ್ಗಾಸಿಂಗ್ ಮೇಲ್ವಿಚಾರಕರಾಗಿ ಭಡ್ತಿಗೊಂಡು ಮಾಣಿ ಶಾಖೆಗೆ ವರ್ಗಾವಣೆ

0

ನೆಲ್ಯಾಡಿ: ಮೆಸ್ಕಾಂ ಪುತ್ತೂರು ಉಪವಿಭಾಗದ ಉಪ್ಪಿನಂಗಡಿ ಶಾಖೆಯ ಗೋಳಿತ್ತೊಟ್ಟು ವ್ಯಾಪ್ತಿಯಲ್ಲಿ ಮೆಕ್ಯಾನಿಕ್ ದರ್ಜೆ-2 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದುರ್ಗಾಸಿಂಗ್ ಅವರು ಮೇಲ್ವಿಚಾರಕರಾಗಿ ಭಡ್ತಿಗೊಂಡು ವಿಟ್ಲ ಉಪವಿಭಾಗದ ಮಾಣಿ ಶಾಖೆಗೆ ವರ್ಗಾವಣೆಗೊಂಡಿದ್ದಾರೆ.
ದುರ್ಗಾಸಿಂಗ್ ಅವರು 2007ರಲ್ಲಿ ಸಹಾಯಕ ಪವರ್‌ಮ್ಯಾನ್ ಆಗಿ ಉಪ್ಪಿನಂಗಡಿ ಶಾಖೆಗೆ ಸೇರ್ಪಡೆಗೊಂಡಿದ್ದರು. ಆ ಬಳಿಕ ಪವರ್‌ಮ್ಯಾನ್ ಆಗಿ, ಮೆಕ್ಯಾನಿಕ್ ದರ್ಜೆ 2 ನೌಕರರಾಗಿ ಭಡ್ತಿಗೊಂಡು ಉಪ್ಪಿನಂಗಡಿ ಶಾಖೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಇವರು ಮೇಲ್ವಿಚಾರಕರಾಗಿ ಭಡ್ತಿಗೊಂಡಿದ್ದು ಮೆಸ್ಕಾಂ ವಿಟ್ಲ ಉಪವಿಭಾಗದ ಮಾಣಿ ಶಾಖೆಗೆ ವರ್ಗಾವಣೆಗೊಂಡಿದ್ದಾರೆ. ದುರ್ಗಾಸಿಂಗ್ ಅವರು ಪುತ್ತೂರು ತಾಲೂಕಿನ ಕಬಕ ನಿವಾಸಿಯಾಗಿದ್ದು ಪರಿಸರ ಪ್ರೇಮಿಯಾಗಿ ಗೋಳಿತ್ತೊಟ್ಟು ಸಹಿತ ಹಲವು ಕಡೆಗಳಲ್ಲಿ ಜಪಾನ್ ಮಾದರಿಯ ಮಿಯಾವಾಕಿ ಅರಣ್ಯ ನಿರ್ಮಾಣ ಮಾಡಿದ್ದರು.

LEAVE A REPLY

Please enter your comment!
Please enter your name here