ಮೃತ ಸಚಿನ್ ಮನೆಗೆ ಶಾಸಕ ಅಶೋಕ್ ರೈ ಭೇಟಿ-ಕುಟುಂಬಕ್ಕೆ ಸಾಂತ್ವನ

0

ಪುತ್ತೂರು; ಇತ್ತೀಚೆಗೆ ನಿಧನರಾದ ಮಾಡಾವು ಸಂಪಾಜೆ ನಿವಾಸಿ ಕುಶಾಲಪ್ಪ ಗೌಡರ ಪುತ್ರ ಸಚಿನ್ ಅವರ ಮನೆಗೆ ಶಾಸಕ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಪುತ್ರನನ್ನು ಕಳೆದುಕೊಂಡು ತೀವ್ರ ದುಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ತಿಳಿಸಿದ ಶಾಸಕರು ಏನೇ ಕಷ್ಟ ಬಂದರೂ ತನ್ನನ್ನು ಸಂಪರ್ಕಿಸುವಂತೆ ತಿಳಿಸಿದರು.

5 ವರ್ಷದಿಂದ ಅಕ್ರಮ ಸಕ್ರಮ ಮಾಡಿಲ್ಲ: ದೂರು
ನಾವು ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ವರ್ಷಗಳು ಕಳೆದಿದೆ. ನಮ್ಮ ವರ್ಗ ಜಾಗಕ್ಕೆ ಹೊಂದಿಕೊಂಡಿರುವ ಜಾಗಕ್ಕೆ ಅಕ್ರಮ ಸಕ್ರಮಕ್ಕೆ ನಾವು ಅರ್ಜಿ ಸಲ್ಲಿಸಿದ್ದೇವೆ ಆದರೆ ಇದುವರೆಗೂ ಯಾರೂ ಮಾಡಿಕೊಟ್ಟಿಲ್ಲ. ಕಳೆದ ಬಾರಿ ಹಲವು ಬಾರಿ ಅಕ್ರಮ ಸಕ್ರಮ ಬೈಠಕ್ ನಡೆದಿತ್ತು. ಎಲ್ಲಾ ಬೈಠಕ್ ವೇಳೆಯೂ ನಾವು ಕೇಳಿಕೊಂಡಿದ್ದೆವು ಆದರೆ ನಮಗೆ ಯಾರೂ ಸಹಾಯ ಮಾಡಿಲ್ಲ. ನಮ್ಮ ಅಕ್ರಮ ಸಕ್ರಮ ಜಾಗವನ್ನು ಈ ಬಾರಿಯಾದರೂ ಮಾಡಿಕೊಡಿ ಎಂದು ಮೃತ ಸಚಿನ್ ತಂದೆ ಶಾಸಕರಲ್ಲಿ ಮನವಿ ಮಾಡಿದರು. ನಿಮ್ಮ ಅಕ್ರಮ ಸಕ್ರಮವನ್ನು ಮುಂದಿನ ಸಿಟ್ಟಿಂಗ್‌ನಲ್ಲಿ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

LEAVE A REPLY

Please enter your comment!
Please enter your name here