ಕೊಕ್ಕಡ: ಬಿರುಗಾಳಿಗೆ ಹಲವು ಮನೆ, ಕೃಷಿಗೆ ಹಾನಿ

0

ನೆಲ್ಯಾಡಿ: ಆ..25ರಂದು ಬೆಳಿಗ್ಗೆ ಬೀಸಿದ ಭಾರೀ ಬಿರುಗಾಳಿಗೆ ಕೊಕ್ಕಡ ಗ್ರಾಮದಲ್ಲಿ ಹಲವು ಮನೆ, ಕೃಷಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.


ಕೊಕ್ಕಡ ಗ್ರಾಮದ ಕೊಡಿಂಗೇರಿ, ಹಾರ, ಮಡೆಜೋಡಿ, ಪಿಜಿನಡ್ಕ ಮೊದಲಾದ ಕಡೆಗಳಲ್ಲಿ ಭಾರೀ ಬಿರುಗಾಳಿ ಬೀಸಿದೆ. ಇದರಿಂದಾಗಿ ಮಡೆಜೋಡಿ ಸಮೀಪದ ಲಿಯೋ ಡಿಸೋಜಾ, ಜಬ್ಬಾರ್ ಹಾಗೂ ಅವರ ಪಕ್ಕದ ಕೃಷಿ ತೋಟಗಳಲ್ಲಿ ನೂರಕ್ಕೂ ಅಧಿಕ ಅಡಿಕೆ ಮರಗಳು ಮುರಿದು ಬಿದ್ದಿವೆ. ಕೊಡಿಂಗೇರಿಯ ಅಣ್ಣು ಗೌಡ, ಶಶಿ, ಕೊಕ್ಕಡ ಗ್ರಾ.ಪಂ ಸದಸ್ಯೆ ಲತಾ, ಹಾರ ಬಾಲಪ್ಪ ಗೌಡ ಅವರಿಗೆ ಸೇರಿದ ಅಡಿಕೆ ಮರಗಳು ಬಿದ್ದಿವೆ. ಪಿಜಿನಡ್ಕ ಕಾಲೋನಿ ನಿವಾಸಿ ಬಾಬಿ ಹಾಗೂ ಅವರ ಸಮೀಪದ ಕೆಲವು ಮನೆಗಳ ಮೇಲ್ಚಾವಣಿ ಬಿರುಗಾಳಿಗೆ ಹಾರಿ ಹಾನಿಗೊಂಡು ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಹಾಗೂ ಕೊಕ್ಕಡ ಗ್ರಾ.ಪಂ.ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here